ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದ ವೃದ್ಧ – ಛಿದ್ರವಾದ ದೇಹ

0

ರೈಲಿನಡಿಗೆ ಬಿದ್ದು ವೃದ್ಧರೊಬ್ಬರ ದೇಹ ಛಿದ್ರಗೊಂಡ ಘಟನೆ ಇಂದು ಸಂಜೆ ಎಡಮಂಗಲದಲ್ಲಿ ನಡೆದಿದೆ. ಅವಘಡದಲ್ಲಿ ಮೃತಪಟ್ಟವರನ್ನು ಮಹಾಲಿಂಗ ನಾಯ್ಕ್ ಸಮಗಾರ (70 ವ.) ಎಂದು ಗುರುತಿಸಲಾಗಿದೆ.

ಮಹಾಲಿಂಗ ನಾಯ್ಕರು ಎಡಮಂಗಲ ದೇವಸ್ಥಾನದ ಬಳಿಯಿಂದ ಹೊಗೆ ಸೊಪ್ಪು, ತರಕಾರಿ ಇತ್ಯಾದಿಗಳನ್ನು ಖರೀದಿಸಿ ರೈಲ್ವೆ ಟ್ರ್ಯಾಕ್ ಮೂಲಕ ನಡೆದುಕೊಂಡು ಹೋಗುತ್ತಿರುವಾಗ ಪುತ್ತೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ವಿಜಯಪುರ ಎಕ್ಸ್‌ಪ್ರೆಸ್ ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಮಳೆ ಜೋರಾಗಿ ಬರುತ್ತಿದ್ದ ಕಾರಣ ಮಹಾಲಿಂಗ ನಾಯ್ಕರಿಗೆ ರೈಲು ಸಮೀಪಿಸಿದ್ದು ತಿಳಿಯಲಿಲ್ಲವೆನ್ನಲಾಗಿದೆ. ಡಿಕ್ಕಿಯ ಬಳಿಕ ರೈಲು ದೇಹವನ್ನು ನೂರಾರು ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದೆ. ಮಹಾಲಿಂಗ ನಾಯ್ಕರ ದೇಹ ಸೊಂಟದಿಂದ ಕೆಳಗೆ ಅಲ್ಲಲ್ಲಿ ಕತ್ತರಿಸಲ್ಪಟ್ಟು ಟ್ರಾಕ್ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತೆನ್ನಲಾಗಿದೆ.