ಎಡಮಂಗಲ : ಗಾಳಿ ಮಳೆಗೆ ಸೂರು ಕಳೆದುಕೊಂಡ ಮೋನಪ್ಪ ಮುಗೇರ ಮತ್ತು ಕಮಲರ ಕುಟುಂಬ

0

ಮೇ. 11ರಂದು ಸಂಜೆ ಬೀಸಿದ ಗಾಳಿ ಮಳೆಗೆ ಎಡಮಂಗಲ ಗ್ರಾಮದ ಬೊಳ್ಮಣ್ಣು ಎಂಬ ಜಾಗದ ನಿವಾಸಿಗಳಾದ ಲಲಿತ ಮತ್ತು ಮೋನಪ್ಪ ಮುಗೇರ ಹಾಗೂ ದಿ. ಜಯರಾಮರ ಪತ್ನಿ ಶ್ರೀಮತಿ ಕಮಲ ಎಂಬ ಎರಡು ಕುಟುಂಬಗಳು ವಾಸವಾಗಿದ್ದ ಮನೆಗಳ ಮೇಲೆ ಮರಬಿದ್ದು, ಮನೆಗೆ ಹಾನಿಯುಂಟಾಗಿದೆ. ಸಂಬಂಧಿಸಿದ ಇಲಾಖೆಯವರು ವಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ‌ ಜಯರಾಮ‌ ಕಲ್ಲರ್ಪೆ ಆಗ್ರಹಿಸಿದ್ದಾರೆ.