ರಾಘವೇಂದ್ರ ಮಠದ ಸಂಪರ್ಕ ರಸ್ತೆಯ ಮೋರಿ ತುಂಡಾಗಿ ರಸ್ತೆಯಲ್ಲಿ ಹರಿಯುತ್ತಿರುವ ಮಳೆಯ ನೀರು

0

ರಾಘವೇಂದ್ರ ಮಠಕ್ಕೆ ಹೋಗುವ ರಸ್ತೆಗೆ ಅಳವಡಿಸಿದ ಮೋರಿ ತುಂಡಾಗಿದ್ದು ಮಳೆ ಬಂದಾಗ ಮಳೆಯ
ನೀರು ರಸ್ತೆಯಲ್ಲಿ ಹರಿಯುತ್ತಿರುವ ಕಾರಣದಿಂದ ಸಂಚಾರಕ್ಕೆ ತೊಂದರೆಯಾಗಿದೆ.


ಕಳೆದ 4 ತಿಂಗಳ ಹಿಂದೆಯೇ ಮೋರಿ ತುಂಡಾಗಿರುವ ಬಗ್ಗೆ ನಗರ ಪಂಚಾಯತಿಗೆ ದೂರು ನೀಡಿದರೂ ದುರಸ್ತಿ ಪಡಿಸಲು ಇದುವರೆಗೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.


ಈ ಭಾಗದಲ್ಲಿ ರಾಘವೇಂದ್ರ ಮಠ ಹಾಗೂ ಸಾಕಷ್ಟು ಮನೆಗಳಿರುವುದರಿಂದ
ಜನರು ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಇದೇ ರೀತಿ ಮಳೆ ನೀರು ಹರಿಯುವುದರಿಂದ ರಸ್ತೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಯ ಕುರಿತು ಪರಿಶೀಲಿಸಿ ದುರಸ್ತಿ ಕಾರ್ಯ ಮಾಡುವ ಬಗ್ಗೆ ಗಮನಹರಿಸಬೇಕಾಗಿದೆ.