ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದಲ್ಲಿ ಅವಲೋಕನ ಸಭೆ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿಯ, ಪದಾಧಿಕಾರಿಗಳು, ಸಂಚಾಲಕರು, ಸರ್ವ ಸದಸ್ಯರನ್ನು ಒಳಗೊಂಡು ಅಂಬಾಡಿಮೂಲೆ “ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವದ” ಅವಲೋಕನ ಸಭೆಯು ಮೇ.12ರಂದು ನಡೆಯಿತು.

ಸಭೆಯಲ್ಲಿ ಪ್ರತಿಷ್ಠಾ ಮಹೋತ್ಸವದ ಯಶಸ್ಸು, ಹಣಕಾಸು ಮತ್ತು ಖರ್ಚು ವೆಚ್ಚಗಳ ವಿವರ, ಕಾರ್ಯ ವೈಖರಿ, ವಿವಿಧ ಉಪ ಸಮಿತಿಗಳ ಜವಾಬ್ದಾರಿ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ ಅಡ್ಕಾರು , ಎ.ಆರ್. ಬಾಬು ಅಡ್ಕಾರು, ಗಣೇಶ್ ಅಂಬಾಡಿಮೂಲೆ, ಭಾಸ್ಕರ ಎ.ಆರ್. ಅಡ್ಕಾರು, ಗಂಗಾಧರ ದುಬೈ, ಕಾರ್ಯದರ್ಶಿ ನವೀನ್ ಅಂಬಾಡಿಮೂಲೆ, ಚಂದ್ರಿಕಾ ಅಂಬಾಡಿಮೂಲೆ, ಕುಸುಮ ಅಂಬಾಡಿಮೂಲೆ, ಪ್ರೇಮ ಅಂಬಾಡಿಮೂಲೆ, ಭಾಸ್ಕರ ಕಾನ ಅಡ್ಕಾರು, ಅರವಿಂದ ಅಡ್ಕಾರು, ಮೇಘನಾಥ ಮಾಯಿಲಕೋಟೆ, ದೀಪಕ್ ಸುಂಕಡ್ಕ, ಗೋಪಾಲ ಕಾನ ಅಡ್ಕಾರು ಸೇರಿದಂತೆ ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.