ಸುಬ್ರಹ್ಮಣ್ಯ: ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ

0

ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಖಡ 92 ಅಂಕಗಳಿಸಿದ ಬಡ ತನದಲ್ಲಿರುವ ವಿದ್ಯಾರ್ಥಿ ಅಕ್ಷಯ ನಂಬಿಯಾರಿಗೆ ಮುಂದಿನ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನ ಮೇ.14 ರಂದು ನೀಡಲಾಯಿತು.

ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ತಿಲಕ್ ಎ.ಎ. ಸಹಾಯಧನವನ್ನ ನೀಡಿದರು ಈ ಸಂದರ್ಭದಲ್ಲಿ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ಶ್ರೀಮತಿ ಗಾಯತ್ರಿ, ಅಕ್ಷಯ ನಂಬಿಯಾರ್ ಅವರ ಮಾತೃಶ್ರೀ ಲಕ್ಷ್ಮಿ ,ಅತ್ತೆ ಪದ್ಮಾವತಿ, ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.