ಮಂಡೆಕೋಲು ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ.2 ಲಕ್ಷ ದೇಣಿಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ಡ್, ಸುಳ್ಯ ತಾಲೂಕು,
ಅಜ್ಜಾವರ ವಲಯದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆಯವರು ಕ್ಷೇತ್ರದ ವತಿಯಿಂದ 2 ಲಕ್ಷ ಸಹಾಯಧನವನ್ನು ಮಂಜೂರು ಮಾಡಿರುತ್ತಾರೆ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸದಾನಂದ ಮಾವಂಜಿ ಅವರಿಗೆ 2 ಲಕ್ಷ ಮೊತ್ತದ ಡಿಡಿ ಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯ, ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಅಜ್ಜಾವರ ವಲಯದ ಮೇಲ್ವಿಚಾರಕಿ ವಿಶಾಲ ಮಂಡೆಕೋಲು ಶೌರ್ಯ ವಿಪತ್ತು ಘಟಕದ ಸದಸ್ಯರಾದ ಅನಿಲ್ ತೋಟಪ್ಪಡಿ ,ಪ್ರಿತೇಶ್, ಸುಪ್ರೀತ್, ಒಕ್ಕೂಟದ ಉಪಾಧ್ಯಕ್ಷರಾದ ಮೋಹಿನಿ ರವರು

ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ರಾಮಚಂದ್ರ ಮಾಸ್ಟರ್, ಕೃಷ್ಣಪ್ರಸಾದ್ ಭಟ್, ಪುತ್ತು ಮಾಸ್ಟರ್ ಮೂರೂರು, ಚಂದ್ರಶೇಖರ್ ಕೆನಾಜೆ, ನಾರಾಯಣ ಗೌಡ ಉಗ್ರಾಣಿ ಮನೆ, ಬಯಲುವಾರು ಸಮಿತಿಯ ಸದಸ್ಯರು ಮೇದಪ್ಪ ಗೌಡ ಬೋಳ ಗಲ್ಲು, ಪುಷ್ಪ , ಯತೀಶ್ ಬೋಳಗಲ್ಲು, ಕೃತಕ ಗರ್ಭಧಾರಣೆ ಪ್ರತಿನಿಧಿಯಾದ ಯತೀಶ್ ,ಸ್ಥಳೀಯ ಸೇವಾ ಪ್ರತಿನಿಧಿಯವರಾದ ಶ್ರೀಮತಿ ವೇದಾವತಿ ಮತ್ತು ಶ್ರೀಮತಿ ಸುನಿತಾ ರವರು ಉಪಸ್ಥಿತರಿದ್ದರು.