ಐ.ಪಿ.ಎಲ್. ನಲ್ಲಿ ಆರ್.ಸಿ.ಬಿ ಗೆಲುವು : ಗಡ್ಡ ಮೀಸೆ ಬೋಳಿಸಿಕೊಂಡ ಕಲ್ಲುಗುಂಡಿಯ ಯುವಕ

0

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಆರ್.ಸಿ.ಬಿ. ಗೆಲುವು ಸಾಧಿಸಿದ್ದರಿಂದ ಯುವಕನೊಬ್ಬ ತನ್ನ ಗಡ್ಡ ಮತ್ತು ಮೀಸೆ ಬೋಳಿಸಿಕೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಮೇ.19ರಂದು ಸಂಭವಿಸಿದೆ.

ಕಲ್ಲುಗುಂಡಿಯ ಸರ್ಪುದ್ಧೀನ್ ಎಂಬ ಯುವಕ ಮೇ.18ರಂದು ರಾತ್ರಿ ನಡೆದ ಐ.ಪಿ
ಎಲ್. ಕ್ರಿಕೆಟ್ ಟೂರ್ನಿಯ ಹೈ ವೋಲ್ಟೇಜ್ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುವುದಾಗಿಯೂ, ಇಲ್ಲದೇ ಹೋದಲ್ಲಿ ತಾನು ತಲೆ ಕೂದಲು ಹಾಗೂ ಗಡ್ಡ -ಮೀಸೆ ಬೋಳಿಸುವುದಾಗಿ ತನ್ನ ಸ್ನೇಹಿತರ ಜೊತೆ ಬೆಟ್ ಕಟ್ಟಿದ್ದರು.
ಆದರೆ ಪಂದ್ಯಾಟದಲ್ಲಿ ಆರ್.ಸಿ.ಬಿ. ತಂಡವು ಗೆಲುವು ಸಾಧಿಸಿದ್ದರಿಂದ ಮೇ. 19ರಂದು ಯುವಕ ಸರ್ಪುದ್ಧೀನ್ ಅವರು ತನ್ನ ಗಡ್ಡ ಹಾಗೂ ಮೀಸೆ ಬೋಳಿಸಿದ್ದರು. ಮಾನವೀಯತೆ ದೃಷ್ಟಿಯಿಂದ ತಲೆಕೂದಲು ಬೋಳಿಸುವುದು ಬೇಡ ಎಂದು ಸ್ಥಳೀಯರು ಹೇಳಿದ ಮೇರೆಗೆ ಗಡ್ಡ ಮತ್ತು ಮೀಸೆ ಮಾತ್ರ ಬೋಳಿಸಿರುವುದಾಗಿ ತಿಳಿದುಬಂದಿದೆ.
ಇದನ್ನು ಈ ಯುವಕ ವೀಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.