ಅಜ್ಜಾವರದಲ್ಲಿ ‘ರಂಗೋಲಿ’ ಮಕ್ಕಳ‌ ಬೇಸಿಗೆ ಶಿಬಿರ

0

ಚೈತ್ರ ಯುವತಿ ಮಂಡಲ ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2ನೇ ವರ್ಷದ “ರಂಗೋಲಿ” ಮಕ್ಕಳ ಬೇಸಿಗೆ ಶಿಬಿರ ಮೇ.20ರಂದು ಆರಂಭಗೊಂಡಿತು.

ಉದ್ಘಾಟನೆಯನ್ನು ಸುಳ್ಯ ಯುವಜನಾ ಸoಯುಕ್ತ ಮಂಡಳಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಎ.ಯಂ ಉದ್ಘಾಟಿಸಿಸಿದರು. ಸಭಾಧ್ಯಕ್ಷತೆಯನ್ನು ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ವಹಿಸಿದರು. ಮುಖ್ಯ ಅತಿಥಿ ಗಳಾಗಿ ನಿವೃತ್ತ ಶಿಕ್ಷಕ ಲೋಕಯ್ಯ ಗೌಡ ಅತ್ಯಾಡಿ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಸರಕಾರಿ ಪ್ರೌಢಶಾಲೆ ಅಜ್ಜಾವರ ಶಿಕ್ಷಕರಾದ ನಿರಂಜನ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುಪ್ರಸಾದ್, ಸಂಪನ್ಮೂಲ ವ್ಯಕ್ತಿ ಮಾಯಿಲಪ್ಪ ಮಂಡೆಕೋಲು ಉಪಸ್ಥಿತರಿದ್ದರು. ಶ್ರೀಮತಿ ಧನಲಕ್ಷ್ಮೀ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು,ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ ಸ್ವಾಗತಿಸಿ, ಯುವತಿ ಮಂಡಲ ಕಾರ್ಯದರ್ಶಿ ಶ್ರೀಮತಿ ಮಾಲತಿಸೂರ್ಯ ವಂದಿಸಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಕಾರ್ಯದರ್ಶಿ ಡಾ.ಐಶ್ವರ್ಯ ಕೆ. ಸಿ , ಹಾಗೂ ಕೋಶಾಧಿಕಾರಿ ಡಾ.ಗೌತಮ್ ಎ. ಜಿ ದಂಪತಿಗಳು ಭೇಟಿ ನೀಡಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರಾದ, ಸೂರ್ಯಕುಮಾರ್, ಕು.ಲಕ್ಷ್ಮೀ ಪಲ್ಲತ್ತಡ್ಕ, ಅಕ್ಷತ್ ಕುಮಾರ್, ಶ್ರೀಮತಿ ಪಲ್ಲವಿ ಪ್ರದೀಪ್, ಗೌರೀಶ್ ಅಡ್ ಪ್ಪoಗಾಯ, ಲೋಕೇಶ್ ರಾವ್, ಗುರುವ ಉಪಸ್ಥಿತರಿದ್ದರು.