ಕಲ್ಲುಮುಟ್ಲು : ಕೆಸರುಮಯ ರಸ್ತೆಯನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಿದ ಆಶ್ರಫ್ ಕಲ್ಲುಮುಟ್ಲು

0

ಕಳೆದ ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆಯಲ್ಲಿ ಹರಿದು ಬಂದ ಕೆಸರು ನೀರು ಸಂಪೂರ್ಣ ರಸ್ತೆಯನ್ನು ಆವರಿಸಿ ವಾಹನ ಸವಾರರಿಗೆ ಮತ್ತು ಸ್ಥಳೀಯ ಪರಿಸರ ನಿವಾಸಿಗಳಿಗೆ ನಡೆದಾಡಲು ಸಮಸ್ಯೆ ಉಂಟು ಮಾಡುತ್ತಿತ್ತು. ಈ ಘಟನೆಯ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ನೀಡಿದರೂ ಮಾಧ್ಯಮಗಳಲ್ಲಿ ವರದಿ ಬಂದರೂ ಕೂಡ ಯಾವುದೇ ಸ್ಪಂದನೆ ದೊರೆಕದೇ ಇದ್ದ ಕಾರಣ, ಸ್ಥಳೀಯ ನಿವಾಸಿ ಆಶ್ರಫ್ ಕೆ.ಐ. ಕಲ್ಲುಮುಟ್ಲು ಎಂಬುವರು ಸ್ವತಃ ಖರ್ಚಿನಿಂದ ಕೆಲಸ ಮಾಡಿ ರಸ್ತೆಯಲ್ಲಿ ತುಂಬಿದ್ದ ಕೆಸರು ಮಣ್ಣನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.