ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಗೆ ನೂತನ ಸಾರಥ್ಯ

0

ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಇದರ ಪ್ರಥಮ ಕೌನ್ಸಿಲ್ ಸಭೆ ಮೇ 25 ರಂದು ಸುಳ್ಯ ಝೋನ್ ನಾಯಕರ ನೇತೃತ್ವದಲ್ಲಿ ನಡೆಯಿತು.

ಕೌನ್ಸಿಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ SჄS ಕಲ್ಲುಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಯವರು ದುಆಃ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಯವರು ಉದ್ಘಾಟಿಸಿದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಝೋನ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಣ್ಣಮೂಲೆ ಯವರ ನೇತೃತ್ವದಲ್ಲಿ ಸಂಘಟನಾ ತರಗತಿ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಂಝ ಟಿ.ಎ ಕೊಯನಾಡು, ಪ್ರಧಾನ ಕಾರ್ಯದರ್ಶಿ ಯಾಗಿ ಸೈದಲವಿ ಚಡಾವು, ಫಿನಾನ್ಸ್ ಕಾರ್ಯದರ್ಶಿ ಯಾಗಿ ಅಬ್ದುಲ್ಲತೀಫ್ ಹೆಚ್.ಎ ಕಲ್ಲುಗುಂಡಿ ರವರೂ, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಎಸ್.ಕೆ, ಜೊತೆ ಕಾರ್ಯದರ್ಶಿ ಯಾಗಿ ರಝಾಕ್ ಕೊಯನಾಡು ರವರನ್ನೂ, ಸಮಿತಿ ಸದಸ್ಯರಾಗಿ ಅಬ್ದುಲ್ ಕಾದರ್ ಚಟ್ಟೆಕಲ್ಲು, ಅಬ್ದುಲ್ ಹಮೀದ್ ಸಂಪಾಜೆ, ಅಬ್ದುಲ್ ಖಾದರ್ ಸಂಪಾಜೆ, ಉಸ್ಮಾನ್ ಕಲ್ಲುಗುಂಡಿ, ಮುಹಮ್ಮದ್ ಹಾರಿಸ್ ಮತ್ತು SSF ಪ್ರತಿನಿಧಿ ಯಾಗಿ ಆಶಿಕ್ ಕೆ.ಹೆಚ್ ಹಾಗೂ SჄS ಪ್ರತಿನಿಧಿಯಾಗಿ ಎ.ಎಂ.ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ರವರುಗಳನ್ನೂ ಆಯ್ಕೆ ಮಾಡಲಾಯಿತು. ಸರ್ಕಲ್ ಕೌನ್ಸಿಲರ್ ಗಳಾಗಿ ಎ.ಎಂ ಅಬ್ದುಲ್ ಕಾದರ್ ನೆಲ್ಲಿಕುಮೇರಿ ಹಾಗೂ ಅಬ್ದುಲ್ ಕಾದರ್ ಸಂಪಾಜೆ ರವರನ್ನೂ ಆಯ್ಕೆ ಮಾಡಲಾಯಿತು. ನೂತನ ಪ್ರಧಾನ ಕಾರ್ಯದರ್ಶಿ ಸೈದಲವಿ ಸ್ವಾಗತಿಸಿ, ವಂದಿಸಿದರು.