ಬಾಳುಗೋಡು: ಬಡಗಿ ವೃತ್ತಿ ಮಾಡುತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

0

ಬಾಳುಗೋಡು ಗ್ರಾಮದ ಪದಕ ನಿವಾಸಿ, ದಿl ಚಂದ್ರಶೇಖರ ಆಚಾರ್ಯ ಅವರ ಪುತ್ರ, ಹರಿಹರ ಪ್ರೌಢಶಾಲಾ ಬಳಿ ಬಡಗಿ ವೃತ್ತಿ ನಡೆಸುತಿದ್ದ ಪ್ರಕಾಶ್ ಆಚಾರ್ಯ ಬಾಳುಗೋಡು ಗ್ರಾಮದ ಮಾನಡ್ಕ ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ
ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಅವರಿಗೆ 31 ವರ್ಷ ವಯಸ್ಸಾಗಿತ್ತು.

ತನ್ನ ಮನೆಯಿಂದು ಸೂಮಾರು 4 ಕಿ .ಮಿ ದೂರದಲ್ಲಿರುವ ಮಾನಡ್ಕ ಎಂಬಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಸಮೀಪವೇ ಆತನ ಬೈಕ್ ಪತ್ತೆಯಾಗಿದ್ದು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆಗೆ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಮೃತ ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.