ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸರ್ವೆ ಇಲಾಖೆಯ ಸಿಂಗಾರ ಶೆಟ್ಟಿ ನೇಮಕ

0

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಿರಿಯ ಸರ್ವೆಯರ್ ಸಿಂಗಾರ ಶೆಟ್ಟಿ ನೇಮಕಗೊಂಡಿದ್ದಾರೆ.

ಸಂಘದ ಅಧ್ಯಕ್ಷರಾಗಿದ್ದ ತೀರ್ಥರಾಮ ಹೊಸೊಳಿಕೆಯವರು ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಸಿಂಗಾರ ಶೆಟ್ಟಿ ಯವರು ಪ್ರಭಾರ ಅಧ್ಯಕ್ಷರಾಗಿದ್ದರು.

ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ತಾಲೂಕು ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿತ್ತು. ಇನ್ನು 5 ತಿಂಗಳಲ್ಲಿ ಸಂಘದ ನಿರ್ದೇಶಕ ಸ್ಥಾನದ ಅವಧಿ ಪೂರ್ಣಗೊಂಡು ಚುನಾವಣೆ ಇರುವುದರಿಂದ ಸಂಘಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಬೇಡ ಉಪಾಧ್ಯಕ್ಷ ರೇ ಅಧ್ಯಕ್ಷರಾಗಿ ‌ಮುಂದುವರಿಯಲಿ ಎಂದು ರಾಜ್ಯ ಸಮಿತಿಯವರು ಸೂಚನೆ ನೀಡಿ, ಸಿಂಗಾರ ಶೆಟ್ಟಿಯವರನ್ನೇ ಅಧಿಕೃತ ನೇಮಕಗೊಳಿಸಿದರೆಂದು ತಿಳಿದುಬಂದಿದೆ.

ಸರ್ವೆ ಇಲಾಖೆಯಲ್ಲಿ 26 ವರ್ಷಗಳಿಂದ ಸೇವೆಯಲ್ಲಿರುವ ಸಿಂಗಾರ ಶೆಟ್ಟರು ಸುಳ್ಯದಲ್ಲಿ 16 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ಸರಕಾರಿ ನೌಕರರ ಸಂಘದಲ್ಲಿ ಎರಡು ಅವಧಿ ನಿರ್ದೇಶಕರಾಗಿ ಆಯ್ಕೆಯಾದ ಇವರು, ಜತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ಯವರು.