ಕರಿಕ್ಕಳ : ವಿದ್ಯುತ್ ಲೈನ್ ದುರಸ್ತಿ ವೇಳೆ ಲೈನ್ ಆನ್ ಮಾಡಲು ಪ್ರಯತ್ನಿಸಿದ ಕಿಡಿಗೇಡಿ ಯುವಕ

0

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ ; ಯುವಕನಿಂದ ಮುಚ್ಚಳಿಕೆ

ವಿದ್ಯುತ್ ಲೈನ್ ದುರಸ್ತಿ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಲೈನ್ ಆನ್ ಮಾಡಲು ಯತ್ನಿಸಿದ ಘಟನೆ ನಿನ್ನೆ ಕರಿಕ್ಕಳದಲ್ಲಿ ನಡೆದಿದ್ದು ಭಾರೀ ಅನಾಹುತವೊಂದು ಕೂದಲೆಳೆಯಲ್ಲಿ ತಪ್ಪಿದೆ.

ಪಂಜದ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲನ್ನು ತೆಗೆಯಲೆಂದು ಜೆ.ಒ.ಸಿ ಆನ್ ಮಾಡಿ ಯಾರು ಆಫ್ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಕೆಲವು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು.


ಇದೇ ವೇಳೆ ಅಲ್ಲಿಯೇ ಸಮೀಪದಲ್ಲಿ ರೂಮ್ ನಲ್ಲಿರುವ ರಬ್ಬರ್ ಟ್ಯಾಪರ್ ಆಗಿರುವ ರಾಜೇಶ್ ಎಂಬತ ಜೆ.ಒ.ಸಿ ಆಫ್ ಮಾಡಿ
ಲೈನ್ ಚಾರ್ಜ್ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಜೆ.ಒ.ಸಿ ಉಪಕರಣದ ಬೊಲ್ಟ್ ತುಂಡಾಗಿ ವಿದ್ಯುತ್ ಪ್ರವಾಹಿಸಲು ಕೆಲವು ಇಂಚು ಅಂತರ ಬಾಕಿ ಉಳಿದ ಕಾರಣ ಭಾರಿ ದುರಂತವೊಂದು ತಪ್ಪಿದೆ. ಸ್ವಲ್ಪ ಹೊತ್ತಿನಲ್ಲಿ ಮೆಸ್ಕಾಂ ಸಿಬ್ಬಂದಿಗಳ ವಿಚಾರ ಗಮನಕ್ಕೆ ಬಂದಿದೆ. ಬಳಿಕ ಸಮೀಪದ ಸಿ.ಸಿ ಕ್ಯಾಮರದಲ್ಲಿ ಪರಿಶೀಲಿಸಿದಾಗ ಕಿಡಿಗೇಡಿ ಯುವಕ ಪತ್ತೆಯಾಗಿದ್ದಾನೆ. ಆರೋಪಿ ರಾಜೇಶ್ ನನ್ನು ಸುಬ್ರಹ್ಮಣ್ಯ ಪೋಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ.