ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಪದಗ್ರಹಣ ಸಮಾರಂಭ

0


ಸುಬ್ರಹ್ಮಣ್ಯದ ರವಿ ಕಕ್ಕೆಪದವು ಅವರ ಮನೆಯ ಜೆಸೀ ಭವನದಲ್ಲಿ ಮೇ.29 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲಿಜನ್ ಇದರ 2024- 25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.



 

           ಸಮಾರಂಭದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲೀಜನ್ ನ ಅಧ್ಯಕ್ಷ  ವಿಶ್ವನಾಥ ನಡುತೋಟ ವಹಿಸಿ ಎಲ್ಲರನ್ನ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ  ಚಿತ್ರಕುಮಾರ್ ಉಪಸ್ಥಿತರಿದ್ದರು. ಗೌರವ ಅತಿಥಿಯಾಗಿ ರಾಷ್ಟ್ರೀಯ ಪೂರ್ವ ಅಧ್ಯಕ್ಷ  ಡಾl ಅರವಿಂದರಾವ್ ಕೇದಿಗೆ,  ಗೌರವ ಅತಿಥಿ ರಾಷ್ಟ್ರೀಯ ಆಡಳಿತ ವಿಭಾಗದ ನಿರ್ದೇಶಕ ನವೀನ್ ಅಮೀನ್ ಶುಭ ಹಾರೈಸಿದರು. ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಪೆರ್ನಾಂಡಿಸ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ವಿಶ್ವನಾಥ ನಡುತೋಟ  ನೂತನ ಅಧ್ಯಕ್ಷ ಡಾl ರವಿಕಕ್ಕೆ ಪದವು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಡಾ. ರವಿ ಕಕ್ಕೆ ಪದವು ಅವರು ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಗಳಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವರ್ಷ ಬೇಕಲ್ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ರಾಧಿಕಾ ಅವರುಗಳನ್ನು  ಸನ್ಮಾನ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಅಶೋಕ್ ಮೂಲೆಮಜಲು ಹಾಗೂ ಮುತ್ತುಕುಮಾರ್ ಅವರುಗಳು ಹೊಸ ಸದಸ್ಯರುಗಳಾಗಿ ಸೀನಿಯರ್ ಚೇಂಬರಿಗೆ ಸೇರ್ಪಡೆಗೊಂಡರು. ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ಸನ ಕಾರ್ಯದರ್ಶಿ ಮೋನಪ್ಪ ಡಿ, ಕೋಶಾಧಿಕಾರಿ ಪ್ರಕಾಶ್ ಕಟ್ಟೆ ಮನೆ ಸದಸ್ಯರುಗಳಾದ ಚಂದ್ರಶೇಖರ ನಾಯರ್, ಗೋಪಾಲ ಎಣ್ಣೆ ಮಜಲ್, ಪ್ರಭಾಕರ ಪಡ್ರೆ, ಲೋಕೇಶ್ ಬಿಎನ್, ಮಾಧವ ದೇವರಗದ್ದೆ, ಸೀನಿಯರೇಟ್ ಅಧ್ಯಕ್ಷೆ ಲೀಲಾ ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಮೋನಪ್ಪ ಡಿ ವಂದಿಸಿದರು.