ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ

0

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು

ಕುಕ್ಕೆ ಸುಬ್ರಹ್ಮಣ್ಯ ಮೇ 30. ಅಪರಾಹ್ನ ಭಾರಿ ಪ್ರಮಾಣದ ಮಳೆಯಾಗಿದೆ. ಇದರಿಂದ ಆದಿ ಸುಬ್ರಹ್ಮಣ್ಯ, ನೂಚಿಲ, ಮತ್ತಿತರ ತಗ್ಗು ಪ್ರದೇಶ ಜಲಾವೃತ ಆಗಿದ್ದು ಮಳೆ ಬಿಟ್ಟ ಬಳಿಕ ನೀರಿನ ಪ್ರಮಾಣ ತಗ್ಗಿತು..

ಸುಮಾರು ಮೂರು ಗಂಟೆ ಬಳಿಕ ಅಧಿಕ ಗೊಂಡ ಮಳೆಯಿಂದಾಗಿ ಕುಕ್ಕೆ ಸುಬ್ರಮಣ್ಯ,ಆದಿಸುಬ್ರಮಣ್ಯ ಭಾಗದ ಕೆಲವು ಅಂಗಡಿಗಳಿಗೆ,
ನೂಚೀಲದಲ್ಲಿ ಕೆಲವು ಮನೆ ಅಂಗಳಕ್ಕೆ, ಸುಬ್ರಮಣ್ಯದ ಕೆಲವು ಅಂಗಡಿಗಳಿಗೆ, ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ.

ನೂಚಿಲ ಎಂಬಲ್ಲಿ ಪ್ರಸನ್ನ ತೋಡ್ತಿಲ್ಲಯ ಎಂಬವರ ಅಂಗಳದಲ್ಲೇ ಮಳೆ ಕೆಸರು ನೀರು ಹರಿದು ಹೋಗಿ ಜಾಗದ ಕಂಪೌಂಡು  ಕುಸಿದ ಘಟನೆಯೂ ವರದಿಯಾಗಿದೆ.