ಹಳೆಯ ನೆನಪುಗಳಿಂದ ಭರವಸೆಯ ಬದುಕು ಕಟ್ಟೋಣ

0

ಹಳೆಯ ನೆನಪುಗಳೊಂದಿಗೆ ಹೊಸ ಬದುಕು ಕಟ್ಟಲು ಆಚರಣೆಗಳಿಗೆ ಸಾಧ್ಯವಾಗುತ್ತದೆ. ಇದರ ನೆನಪುಗಳೊಂದಿಗೆ ಯುವ ಶಕ್ತಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಬೇಕು ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು.

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಶತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಇಲ್ಲಿ ಪೆಟ್ರೋಲ್ ಬಂಕ್ ಗೆ ಶಿಲಾನ್ಯಾಸ ಮಾಡಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಪೆಟ್ರೋಲ್, ಡೀಸೆಲ್ ನೀಡುವಂತಾಗಲಿ ಎಂದು ಅವರು ಆಶಿಸಿದರು.