ಕನಕಮಜಲು ಕಾಡುದಾರಿಯಲ್ಲಿ ಹೋಗುತ್ತಿರುವ ಈ ಮೂಕ ಯುವಕ ಯಾರು ?

0

ಪೋಷಕರ ಜತೆ ಸೇರಲು ಸಹಾಯ ಮಾಡುವಿರಾ?

ದೇಲಂಪಾಡಿ, ದೇರ್ಕಜೆ, ಕನಕ ಮಜಲು ಕಾಡುದಾರಿಯಲ್ಲಿ ಹೋಗುತ್ತಿರುವ ಮೂಕ ಯುವಕ ಪೋಷಕರೊಂದಿಗೆ ಸೇರಲು ಸಹಾಯ ಬೇಕಾಗಿದೆ

ಮಯ್ಯಾಳ ದೇಲಂಪಾಡಿ ಯಿಂದ ಕುತ್ತಿಮುಂಡ ಕ್ಕೆ ಬಂದು ಅಲ್ಲಿಂದ ಕಾಡುದಾರಿಯಲ್ಲಿ ದೇರ್ಕಜೆ ಗೆ ಬಂದ ಈತ ಕನಕಮಜಲು ಕಡೆ ಬಂದಿದ್ದಾನೆ. ಈತನಿಗೆ ಬಾಯಿ ಬರುವುದಿಲ್ಲ. ಅವನ ಪೋಷಕರಿಗಾಗಿ ಹುಡುಕುತ್ತಾ ಹೋಗುತ್ತಿರುವಂತೆ ಕೈ ಭಾಷೆಯನ್ನು ಸ್ಥಳೀಯರು ಕಂಡು ಕೊಂಡಿದ್ದಾರೆ. ದೇರ್ಕಜೆಯ ಮನೆಯವರು ಈತನಿಗೆ ಚಹ ತಿಂಡಿ ಕೊಟ್ಟು ಕಳಿಸಿದ್ದಾರೆ. ಈತನ ಅಥವಾ ಪೋಷಕರ ಕುರಿತು ಮಾಹಿತಿ ಇದ್ದರೆ ಮಾಹಿತಿ ನೀಡುವಂತೆ ಅಲ್ಲಿನವರು ಕೋರಿದ್ದಾರೆ.