ನಿಂತಿಕಲ್ಲು ಪರಿಸರದಲ್ಲಿ ಕಸದ ರಾಶಿ ಸಾರ್ವಜನಿಕರಿಂದ ಕಸ ವಿಲೇವಾರಿ ಮಾಡದ ಬಗ್ಗೆ ಆಕ್ರೋಶ

0

ವೇಗವಾಗಿ ಬೆಳೆಯುತ್ತಿರುವ ನಿಂತಿಕಲ್ಲು ಪೇಟೆಗೆ ಈಗ ಕಸ ವಿಲೇವಾರಿಯ ಸಮಸ್ಯೆ ಎದುರಾಗಿದೆ. ಬೆಳ್ಳಾರೆಗೆ ಹೋಗುವ ರಸ್ತೆಯ ಬದಿ ಮರದ ಬುಡದಲ್ಲಿ ಕಸವನ್ನು ರಾಶಿ ಹಾಕಿದ್ದು, ಮಳೆ ಬರುವಾಗ ಗಬ್ಬು ವಾಸನೆ ಬೀರುತ್ತಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

ಸೂಕ್ತ ಕಸ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಆಡಳಿತಕ್ಕೆ ಮನವಿ ಮನವಿ ಮಾಡಿಕೊಂಡಿದ್ದಾದೆ. ನಿಂತಿಕಲ್ಲು ಪೇಟೆ ಮುರುಳ್ಯ ಗ್ರಾ.ಪಂ. ವ್ಯಾಪ್ತಿಗೆ ಬರುತ್ತಿದ್ದು, ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿದಾಗ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಪ್ರತೀ ಅಂಗಡಿಯವರಿಂದಲೂ ವಾರಕ್ಕೊಂದು ಬಾರಿ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಆದರೂ ರಸ್ತೆ ಬದಿ ಕಸ ಬಿಸಾಡುವವರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.