ನಾಗನಕಜೆ ನಾಗರಿಕರಿಂದ ರಸ್ತೆ ದುರಸ್ತಿ, ಇಕ್ಕೆಲಗಳ ಮರದ ರೆಂಬೆ ಕೊಂಬೆ ತೆರವು

0

ಅಲೆಕ್ಕಾಡಿ, ನಾಗನಕಜೆ ,ನೂಜಾಡಿ ರಸ್ತೆ ತೀರ ಸಂಚಾರಕ್ಕೆ ಅಡೆ ತಡೆಗಳಿರುವುದರಿಂದ ವಾಹನ ಸಂಚಾರಕ್ಕೆ ತೊಡಕ್ಕಾಗುತ್ತಿತ್ತು. ರಸ್ತೆ ಫಲಾನುಭವಿಗಳು ಸೇರಿ ರಸ್ತೆಯ ಕಸಗಡ್ಡಿಗಳನ್ನು ತೆಗೆದು, ಚರಂಡಿ ಸಮರ್ಪಕ ಸ್ವಚ್ಛಗೊಳಿಸಿ, ಮರದ ಗೆಲ್ಲು- ಕೊಂಬೆಗಳನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಶ್ರಮದಾನ ಮೂಲಕ ಮಾಡಿದರು. ಹರ್ಷವರ್ಧನ್ ನಾರಾಯಣ ಪುರೋಹಿತರು, ಪಂಚಾಯತ್ ಸದಸ್ಯ ನವೀನ್ ಕರಿಂಬಿಲ,ಎನ್‌.ಎನ್ ಚಂದ್ರಕುಮಾರ್ ದಿವಕರ ನಾಗನಕಜೆ ,ಧನುಷ್ ನಾವೂರು ,ಲೋಕನಾಥ ನಾವೂರು ,ಸೀತಾರಾಮ ಮಾಸ್ಟರ್, ನಾರಾಯಣ ಗೌಡ ಸೂಟೆಮಜಲು, ತಿಲಾಕಾಕ್ಷ .ಎಸ್, ಜಯಂತ ಎನ್, ಯುವರಾಜ ನೂಜಾಡಿ, ಅಭಿಷೇಕ್ ,ಯತೀಶ್ ನಾಗನಕಜೆ, ಸುದರ್ಶನ್ ನಾಗನಕಜೆ , ರವಿವರ್ಮ ಎ. , ರೋಹಿತ್ ಕೆ. ಇನ್ನಿತರರು ಭಾಗವಹಿಸಿದ್ದರು.