ಮರ್ದೂರಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೋಕೇಶ್ವರಿಯವರಿಗೆ ಸನ್ಮಾನ

0

ಅಂಗನವಾಡಿ ಕೇಂದ್ರ ಮರ್ದೂರಡ್ಕ ಇಲ್ಲಿ ಪ್ರಾರಂಭದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ 29 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದ ಶ್ರೀಮತಿ ಲೋಕೇಶ್ವರಿ ಎರ್ಕ ಇವರ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಸ.ಕಿ.ಪ್ರಾ. ಶಾಲೆ ಮರ್ದೂರಡ್ಕದಲ್ಲಿ ಜೂ. 5 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಡಮಂಗಲ ಗ್ರಾಮ ಪಂಚಾಯಿತ್ ಸದಸ್ಯೆ ,ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಪ್ರವೀಣ್ ವಹಿಸಿದ್ದರು.


ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಪಂಜ ವಲಯ ಇದರ ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುನಿತಾ ಚಿದಾನಂದ, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರಾದ ಮೋಹನ್ ದಾಸ್ ಬಲ್ಕಾಡಿ, ನಿವೃತ್ತ ಟೆಲಿಫೋನ್ ಉದ್ಯೋಗಿ ಶೇಖರ ಎರ್ಕ, ಸ.ಕಿ.ಪ್ರಾ ಶಾಲೆ ಮುಖ್ಯ ಗುರುಗಳಾದ ಪ್ರದೀಪ್ ಕುಮಾರ್ , ಆಶಾಕಾರ್ಯಕರ್ತೆ ಶ್ರೀಮತಿ ವಿಜಯ ರಾಮಣ್ಣ ಉಪಸ್ಥಿತರಿದ್ದರು.


ಅಂಗನವಾಡಿ ಕಾರ್ಯಕರ್ತೆಗೆ ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ, ಹೂ ಹಣ್ಣು ನೀಡಿ , ಚಿನ್ನದ ಕಿವಿಯೋಲೆ ನೀಡಿ ಗೌರವಿಸಲಾಯಿತು .


ಸ್ತ್ರೀ ಶಕ್ತಿ ಸಂಘ, ಪೋಷಕರ ಬಳಗ, ಗೆಳೆಯರ ಬಳಗ ಊರವರು ಸಹಕರಿಸಿದರು.


ಸ್ತ್ರೀ ಶಕ್ತಿ ಸಂಘದ ಸದಸ್ಯೆ ಶ್ರೀಮತಿ ಲೀಲಾವತಿ ರೈ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಶ್ರೀಮತಿ ರೂಪಶ್ರೀ ಕೆ ವಂದಿಸಿದರು . ಅತಿಥಿ ಶಿಕ್ಷಕಿ ಗಾಯತ್ರಿ ಪುಂಜಕಟ್ಟೆ ಕಾರ್ಯಕ್ರಮ ನಿರೂಪಿಸಿದರು.