ಸರಕಾರಿ ಪ್ರೌಢಶಾಲೆ ಎಲಿಮಲೆ – ಪೋಷಕರ ಸಭೆ – ಸಾಧಕ ವಿದ್ಯಾರ್ಥಿಗೆ ಗೌರವಾರ್ಪಣೆ

0

ಎಸ್.ಡಿ.ಎಂ.ಸಿ.ಯ ನೂತನ ಅಧ್ಯಕ್ಷರಾಗಿ ಧನಂಜಯ ಬಾಳೆತೋಟ ಆಯ್ಕೆ

ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ 2024-25ನೇ ಸಾಲಿನ ಪೋಷಕರ ಸಭೆ ಹಾಗೂ  ನೂತನ ಎಸ್.ಡಿ.ಎಂ.ಸಿ. ರಚನೆ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ  ಸಾಧಕ ವಿದ್ಯಾರ್ಥಿಗೆ ಗೌರವಾರ್ಪಣೆ ಕಾರ್ಯಕ್ರಮ ಇಂದು(ಜೂ.10) ನಡೆಯಿತು.

ಎಸ್.ಡಿ.ಎಂ.ಸಿ.ಯ ನೂತನ ಅಧ್ಯಕ್ಷರಾಗಿ ಧನಂಜಯ ಬಾಳೆತೋಟ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಆಯ್ಕೆಯಾದರು. ಸದಸ್ಯರುಗಳಾಗಿ ಅಚ್ಚುತ ಮುಂಡೋಕಜೆ, ಪುರುಷೋತ್ತಮ ಸುಳ್ಳಿ, ಕೃಷ್ಣಪ್ಪ ಗೌಡ ಹರ್ಲಡ್ಕ, ಗೋವಿಂದ ಪಾರೆಮಜಲು, ಮಾಧವ ಶೀರಡ್ಕ, ಲೀಲಾವತಿ ಹರ್ಲಡ್ಕ, ಐಸಾಬಿ ಜೀರ್ಮುಕಿ, ವಿಶಾಲಾಕ್ಷಿ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ (568) ವಿದ್ಯಾರ್ಥಿ ಪುಷ್ಪಕ್ ಬಿ. ಗೆ ಸನ್ಮಾನಿಸಿ ಗೌರವಿಸಲಾಯಿತು. ‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.

ಸಭೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಂದರ ಕೆ. ಸ್ವಾಗತಿಸಿ, ಶಿಕ್ಷಕಿ ಸಂಗೀತ ಸಿ. ವಿ. ವಂದಿಸಿದರು. ಶಿಕ್ಷಕ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.