ಕಲ್ಚರ್ಪೆಯಲ್ಲಿ ಮಳೆನೀರಿಗೆ ಹರಿದು ಹೋಗುವ ಕಸ ತೆರವು

0

ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಈ ಭಾಗದಲ್ಲಿ ಪೂಮಲೆ ಭಾಗದಿಂದ ಹರಿದು ಬರುವ ನೀರಿನ ತೋಡು ಇದ್ದು ಮಳೆ ನೀರಿಗೆ ಕಸಗಳು ಕೊಚ್ಚಿಕೊಂಡು ಹೋಗಿ ಪಯಸ್ವಿನಿ ನದಿಗೆ ಸೇರುವ ಸಂಭವ ಎದುರಾಗಿತ್ತು.


ಇದಕ್ಕೆ ಸ್ಪಂದಿಸಿರುವ ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ಸ್ಥಳಕ್ಕೆ ಜೆಸಿಪಿಯನ್ನು ತರಿಸಿ ಕಸದ ತೆರವು ಕಾರ್ಯವನ್ನು ಮಾಡಿಸುತ್ತಿದ್ದಾರೆ.