ಸುಬ್ರಹ್ಮಣ್ಯ ಹೆದ್ದಾರಿ ಪಕ್ಕ ಕಾಡಾನೆ ಪ್ರತ್ಯಕ್ಷ

0

ಸುಬ್ರಹ್ಮಣ್ಯದ ಇಂಜಾಡಿ ಮಹಾಮಾಯ ರೆಡಿಸೆನ್ಸಿ ಎದುರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಾಡನೇ ಪ್ರತ್ಯಕ್ಷವಾದ ಘಟನೆ ಜೂ. 11 ರ ರಾತ್ರಿ ನಡೆದಿದೆ.

ರಾತ್ರಿ 7.30ರ ಸುಮಾರಿಗೆ ಕಾಡಾನೆ ಇರುವುದನ್ನು ಸಾರ್ವಜನಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸುಬ್ರಹಣ್ಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
ಪಟಾಕಿ ಸಿಡಿಸಿ ಆನೆಯನ್ನು ಕಾಡಿನೊಳಗೆ ಕಳಿಸುವ ಪ್ರಯತ್ನ ಮಾಡಿದ್ದಾರೆ.


ಸ್ಥಳಕ್ಕೆ ಆಗಮಿಸಿದ  ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು, ಹಾಗೂ ಉಪ ವಲಯ ಅರಣ್ಯ ಅಧಿಕಾರಿ  ಮನೋಜ್, ಅರಣ್ಯ ರಕ್ಷಕ ಅಶೋಕ್, ಹಾಗೂ ಅರಣ್ಯ ವೀಕ್ಷಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.