ಸುಳ್ಯವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರ ವರ್ಗ ಮತ್ತು ನೂತನ ಪದಾಧಿಕಾರಿಗಳ ಘೋಷಣೆ

0

ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ವತಿಯಿಂದ ಕಾರ್ಯಕರ್ತರವರ್ಗ ನೂತನ ಪದಾಧಿಕಾರಿಗ ಘೋಷಣೆಯು ವಿಶ್ವಹಿಂದೂ ಪರಿಷದ್ ಸುಳ್ಯ ತಾಲ್ಲೂಕು ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ ಅಧ್ಯಕ್ಷತೆಯಲ್ಲಿಚೆನ್ನಕೇಶವ ದೇವಸ್ಥಾನದಲ್ಲಿ ಜೂ 23 ರಂದು ನಡೆಯಿತು.

ವಿಶ್ವ ಹಿಂದೂ ಪರಿಷದ್ ನ ಜಿಲ್ಲಾಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ ರವರು ಪ್ರಸ್ತುತ ಸಮಾಜದಲ್ಲಿ ಹಿಂದೂ ಸಂಘಟನೆ ಜವಾಬ್ದಾರಿಯನ್ನು ವಿವರಿಸಿ ಘೋಷಿಸಿದರು.ನಂತರ ವಿಶ್ವಹಿಂದೂ ಪರಿಷದ್ ನ ಪ್ರಾಂತ ಗೋರಕ್ಷಾ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ ರವರು ಸಂಘಟನೆ ಯ ಮಹತ್ವ ವನ್ನು ವಿವರವಾಗಿ ವಿವರಿಸಿದರು .ನೂತನ ಜವಾಬ್ದಾರಿ ಯಲ್ಲಿ ಮಾತೃ ಶಕ್ತಿ ಪ್ರಮುಖರಾಗಿ ರೀನಾ ಚಂದ್ರಶೇಖರ ಚೋಡಿಪಣೆ, ದುರ್ಗಾವಾಹಿನಿ ಸಂಯೋಜಕಿಯಾಗಿ ವಿಮಲಾ ಸೀತಾರಾಮ್ ಕರ್ಲಪ್ಪಾಡಿ, ಸಹ ಸಂಯೋಜಕಿಯಾಗಿ ಪಾರ್ವತಿ ವಿಶ್ವನಾಥ್, ಬಜರಂಗದಳ ದ ಸುರಕ್ಷಾ ಪ್ರಮುಖರಾಗಿ ದಿವಾಕರ್ ಬಾಳಿಲ, ಬಲೂಪಾಸನ ಪ್ರಮುಖರಾಗಿ ಪ್ರಬಂಧ ರೈ, ಸಹ ಗೊರಕ್ಷಾ ಪ್ರಮುಖರಾಗಿ ಮಂಜುನಾಥ್ ಕಾಟೂರು ರವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ವಿಶ್ವಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ,ಕಾರ್ಯದರ್ಶಿ ನವೀನ್ ಎಲಿಮಲೆ, ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ , ಪ್ರಖಂಡ ಪ್ರಮುಖರಾದ ಸನತ್ ಚೊಕ್ಕಾಡಿ, ಭಾನುಪ್ರಕಾಶ್ ಪೆರುಮುಂಡ, ಸತೀಶ್,ಬಾನುಪ್ರಕಾಶ್ ಪೆಲ್ತಡ್ಕ, ಸಂದೀಪ್ ವಳಲಂಬೆ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.