ನಡುಗಲ್ಲು ಹಿ.ಪ್ರಾ.ಶಾಲೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶಿವರಾಮ ಉತ್ರಂಬೆ, ಉಪಾಧ್ಯಕ್ಷರಾಗಿ ಶ್ರೀಮತಿ ಶ್ರುತಿ ಮರಕತ

0
 ನಾಲ್ಕೂರು ಗ್ರಾಮದ ನಡುಗಲ್ಲು ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶಿವರಾಮ ಉತ್ರಂಬೆ, ಉಪಾಧ್ಯಕ್ಷರಾಗಿ  ಶ್ರೀಮತಿ ಶ್ರುತಿ ಮರಕತ ಆಯ್ಕೆಯಾಗಿದ್ದಾರೆ.

ಜೂ.22 ರಂದು ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸದಸ್ಯರುಗಳಾಗಿ ರಮ್ಯಾ ಕಾಯರ ಮುಗೇರು, ಪುಷ್ಪ ಅಂಜೇರಿ, ಶ್ಯಾಮಲ, ನಳಿನಾಕ್ಷಿ ಹಲ್ಗುಜಿ ರೇವತಿ, ಸವಿತ, ಶಶಿಕುಮಾರ್ ಮರಕತ, ಹರಿಶ್ಚಂದ್ರ ಚಾರ್ಮಾತ , ಯುವರಾಜ ಅಂಬೆಕಲ್ಲು, ಪ್ರಶಾಂತ್ ನೆಲ್ಲಿಪುಣಿ, ಸತೀಶ್ ಹ ಲ್ಗುಜಿ, ವಿಜಯ್ ಕುಮಾರ್ ಚಾರ್ಮಾತ, ಸತೀಶ್ ಎರ್ಧಡ್ಕ ಮತ್ತು ಬಾಲಕೃಷ್ಣ ನಾಯ್ಕ್ ಇರಲಿದ್ದಾರೆ.

 ನಂತರ ನೂತನ  ಎಸ್ ಡಿ ಎಂ ಸಿ ಯ ಪ್ರಥಮ ಸಭೆಕರೆಯಲಾಯಿತು.ಸಭೆಯಲ್ಲಿ ಶ್ರಮದಾನ, ಶಾಲಾ ಕೈತೋಟ ನಿರ್ವಹಣೆ, ಗೌರವ ಶಿಕ್ಷಕಿಯ ನೇಮಕಾತಿ, ಅಡುಗೆ ಸಿಬಂದಿಗಳ ನೇಮಕಾತಿ - ಸಮಯ ಪಾಲನೆ, ಮುಂದಿನ ವರ್ಷದ 8ನೇ ತರಗತಿ ಆರಂಭಿಸುವ ಬಗ್ಗೆ, ಶೌಚಾಲಯ - ಶಾಲಾ ಕಟ್ಟಡ  - ರಸ್ತೆ ದುರಸ್ತಿ   - "ಎಸ್ ಡಿ ಪಿ  "ಅಂಶಗಳ ಬಗ್ಗೆ ಚರ್ಚಿಸಿ     ನಿರ್ಣಯ ಕೈಗೊಳ್ಳಲಾಯಿತು. 

ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಶಿಕ್ಷಕಿ ಶ್ರೀಮತಿ ವನಜಾಕ್ಷಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ, ಅಧ್ಯಕ್ಷರಾದ ಶಿವರಾಮ ಉತ್ತರಂಬೆ ನಿಕಟ ಪೂರ್ವ ಅಧ್ಯಕ್ಷರಾಗದ ಶ್ರೀಮತಿ ಉಮೇಶ್ವರಿ ನಲಿ ಪುಣಿ, ಉಪಾಧ್ಯಕ್ಷರಾದ ಶ್ರೀಮತಿ ಶ್ರುತಿ ಮರಕತ,ಮಾಜಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮೋಹನ್ ನಾಯ್ಕ್, ಶಿಕ್ಷಕರಾದ ಮಹೇಶ್ ಕೆಕೆ, ಶ್ರೀಮತಿ ಸುಮನ, ಶ್ರೀಮತಿ ಮೋಕ್ಷ ಉಪಸ್ಥಿತರಿದ್ದರು