ದಿ. ಖಲಂದರ್ ಮಾಂಬ್ಳಿರವರ ನೂತನ ಗೃಹಪ್ರವೇಶ

0

ಸಯ್ಯದ್ ಫಝಲ್ ಕೊಯಮ್ಮ ತಂಗಳ್ ಕೂರತ್ ರವರಿಂದ ಕುಟುಂಬಸ್ಥರಿಗೆ ಮನೆ ಹಸ್ತಾಂತರ

ಗಾಂಧಿನಗರ ಜುಮ್ಮಾ ಮಸೀದಿ ಖತೀಬರಿಂದ ಉದ್ಘಾಟನೆ

ಕಳೆದ ಕೆಲವು ವರ್ಷಗಳ ಹಿಂದೆ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದ ಎಸ್ ಎಸ್ ಎಫ್ ಸಂಘಟನೆಯ ಕಾರ್ಯಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ದಿವಂಗತ ಖಲಂದರ್ ಮಾಂಬ್ಳಿಯವರ ನೂತನ ಗೃಹಪ್ರವೇಶ ಕಾರ್ಯಕ್ರಮ ಜುಲೈ 4 ರಂದು ನಡೆಯಿತು.
ನೂತನ ಮನೆ ನಿರ್ಮಾಣಕ್ಕೆ ಸುಳ್ಯದ ಮತ್ತು ಇತರ ಭಾಗಗಳಿಂದ ದಾನಿಗಳು ಮತ್ತು ಕುಟುಂಬಸ್ಥರು ಸಹಕಾರ ನೀಡಿದ್ದರು. ಸುಳ್ಯದ ಕಲ್ಲುಮುಟ್ಲು ವಿನಲ್ಲಿ ನಿರ್ಮಾಣಗೊಂಡ ನೂತನ ಮನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಕೂರತ್ ತಂಗಳ್ ರವರು ಅಸ್ತಾಂತರಿಸಿದರು.

ಗಾಂಧಿನಗರ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಪ್ರಾರ್ಥನೆ ನೆರವೇರಿಸಿ ನೂತನ ಮನೆಯನ್ನು ಉದ್ಘಾಟಿಸಿದರು.
ಮುಂಜಾನೆ ಮೌಲೂದ್ ಪಾರಾಯಣ ಮತ್ತು ದುವಾ ಮಜ್ಲೀಸ್ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಸುಳ್ಯ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ,ಮುಖಂಡರುಗಳಾದ ಅಬ್ದುಲ್ ಶುಕೂರ್ ಹಾಜಿ, ಅಬ್ದುಲ್ ರಝಕ್ ಹಾಜಿ ರಾಜಧಾನಿ,ಶಾಫಿ ಕುತ್ತಮೊಟ್ಟೆ,ಹಿರಿಯರಾದ ಅಹ್ಮದ್ ಕಲ್ಲುಮುಟ್ಲು ಹಾಗೂ ಎಸ್ ವೈ ಎಸ್ ಎಸ್,ಎಸ್ ಎಫ್,ಎಸ್ ಎಮ್ ಎ, ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಮುಖಂಡರು ಮತ್ತು ಕಾರ್ಯಕರ್ತರುಗಳು, ಸ್ಥಳೀಯರು, ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.