ಸುಬ್ರಹ್ಮಣ್ಯಕ್ಕೆ ಬೈಪಾಸ್ ರಸ್ತೆಗೆ ಉಸ್ತುವಾರಿ ಸಚಿವರಿಗೆ ಮನವಿ, ಪರಿಶೀಲನೆಗೆ ಶಿಫಾರಸು

0

ಸುಬ್ರಹ್ಮಣ್ಯ ಕ್ಕೆ ಬೈಪಾಸ್ ರಸ್ತೆ ಆಗಬೇಕೆಂಬ ಭೇಡಿಕೆಯ ಮನವಿಗೆ ಪಿ.ಡಬ್ಯ್ಲೂ.ಡಿ ಗೆ ಪರಿಶೀಲನೆ ನಡೆಸಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಶಿಫಾರಸು ಮಾಡಿದ ಘಟನೆ ಕಡಬದಲ್ಲಿ ಜು.6 ರಂದು ನಡೆದ ಜನ ಸಂಪರ್ಕ ನಡೆದಿದೆ.

ಸುಬ್ರಹ್ಮಣ್ಯದ ಶಿವರಾಮ ರೈ ಮತ್ತಿತರರು ಸೇರಿ ಸುಬ್ರಹ್ಮಣ್ಯಕ್ಕೆ ಬೈಪಾಸ್ ರಸ್ತೆ ಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ ಸಲ್ಲಿಸಿದರು. ಅವರು ತಕ್ಷಣ ಪಿ.ಡಬ್ಲ್ಯೂ.ಡಿ ಅಧಿಕಾರಿಗಳಿಗೆ ಬೈಪಾಸ್ ರಸ್ತೆಯ ನಿರ್ಮಾಣದ ಅವಕಾಶಗಳ ಪರಿಶೀಲನೆ ನಡೆಸಲು ಶಿಫಾರಸು ಮಾಡಿದರೆನ್ನಲಾಗಿದೆ.