ಬೆಳ್ಳಾರೆ:ಮದ್ಯವರ್ಜನಾ ಶಿಬಿರದಲ್ಲಿ ಜಾಗೃತಿ ಧರ್ಮ ಕ್ಷೇತ್ರ ಎಂಬ ವಿನೂತನ ಯಕ್ಷಗಾನ ಪ್ರದರ್ಶನ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1812 ನೇ ಮದ್ಯವರ್ಜನಾ ಶಿಬಿರದಲ್ಲಿ ಜಾಗೃತಿ ಸಂದೇಶ ಸಾರುವ ವಿನೂತನ ಶೈಲಿಯ ಯಕ್ಷಗಾನ ಪ್ರದರ್ಶನ ವಾಯಿತು.

ಮದ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರ ಸಾರಥ್ಯದಲ್ಲಿ ನಡೆಯುತ್ತಿರುವ ಮದ್ಯವರ್ಜನಾ ಶಿಬಿರದ ಉದ್ದೇಶದ ಬಗ್ಗೆ ಸಾರುವ ಸಾರಾಂಶದ ಯಕ್ಷಗಾನ ವು ಜನಜಾಗೃತಿ ವೇದಿಕೆಯ ಸದಸ್ಯ ಪದ್ಮನಾಭ ಜೈನ್ ರವರ ರಚನೆ ಮತ್ತು ನಿರ್ದೇಶನದಲ್ಲಿ ನಡೆಯಿತು.
ಸ್ಥಳೀಯ ತಾಲೂಕು ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಜಾಗೃತಿ ಧರ್ಮ ಕ್ಷೇತ್ರ ಎಂಬ ಪ್ರಸಂಗವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಶಿಬಿರದ ಅಧ್ಯಕ್ಷೆ ರಾಜೀವಿ ರೈ, ಮತ್ತು ವಲಯಾಧ್ಯಕ್ಷ ಆನಂದರವರನ್ನು ಸನ್ಮಾನಿಸಲಾಯಿತು.