ಸ್ಮಿತಾ ಅಮೃತ್ ರಾಜ್ ‘ಅಪ್ಪ’ ಪ್ರಶಸ್ತಿಗೆ ಆಯ್ಕೆ

0

ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನ ಕೊಡಮಾಡುವ ‘ಅಪ್ಪ ಪ್ರಶಸ್ತಿ’ಗೆ 2021-2023ರ ಅವಧಿಯಲ್ಲಿ ಪ್ರಕಟವಾಗಿರುವ ವಿವಿಧ ಲೇಖಕರ ನಾಲ್ಕು ಕೃತಿಗಳು ಆಯ್ಕೆಯಾಗಿವೆ. ಕೊಡಗಿನ ಸ್ಮಿತಾ ಅಮೃತ್ ರಾಜ್ ಅವರ ‘ನೆಲದಾಯ ಪರಿಮಳ’ (ಲಲಿತ ಪ್ರಬಂಧಗಳ ಸಂಕಲನ) ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಆ.4ರಂದು ತುಮಕೂರಿನಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಳಗದ ಸಂಚಾಲಕ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.