ಬೆಳ್ಳಾರೆಯಲ್ಲಿ ಬ್ರಾಹ್ಮರಿ ತೆಂಗಿನಕಾಯಿ ಖರೀದಿ ಕೇಂದ್ರ ಶುಭಾರಂಭ

0

ಬೆಳ್ಳಾರೆಯ ಬಸ್ ನಿಲ್ದಾಣ ಬಳಿ ಪಂಚಾಯತ್ ಕಟ್ಟಡದಲ್ಲಿ ವಿವೇಕ್ ರೈ ಶೇಣಿಯವರ ಮಾಲಕತ್ವದ ಬ್ರಾಹ್ಮರಿ ತೆಂಗಿನಕಾಯಿ ಖರೀದಿ ಕೇಂದ್ರ ಜು.12 ರಂದು ಶುಭಾರಂಭಗೊಂಡಿತು.


ಬೆಳಿಗ್ಗೆ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಮಾಲಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿ ತೆಂಗಿನಕಾಯಿ,ಬಾಳೆಗೊನೆ, ಗೇರುಬೀಜ ಮತ್ತು ಕೊಕ್ಕೋ ಇವುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುವುದು. ತೆಂಗಿನಕಾಯಿ ಮರದಿಂದ ಕೀಳುವ ಹಾಗೂ ಸುಲಿಯುವ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.