ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ನಿಶ್ಚಲ್ ದ್ವಿತೀಯ

0

ಯೋಗ ದಿನಾಚರಣೆ ಪ್ರಯುಕ್ತ ಕುಂಡಲಿನಿ ಯೋಗ ಶಾಲೆ ಬೆಂಗಳೂರು ಇವರು ನಡೆಸಿದ ರಾಷ್ಟ್ರಮಟ್ಟದ ಮುಕ್ತ ಯೋಗ ಸ್ಪರ್ಧೆಯಲ್ಲಿ ನಿಶ್ಚಲ್ ಕೆ.ಜೆ.ರವರು 15-20ರ ವಯೋಮಾನದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಎಮ್‌ಎಸ್ ರಾಮಯ್ಯ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಇವರು ಮೂಲತಾ ಪೆರಾಜೆಯ ಕರೆಂಬಿಯ ಪ್ರಸ್ತುತ ಪುತ್ತೂರಿನ ನೆಹರೂನಗರ ನಿವಾಸಿ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ಧನ ಗೌಡ ಮತ್ತು ಜ್ಯೋತಿ ದಂಪತಿ ಪುತ್ರ.