ಸುಬ್ರಹ್ಮಣ್ಯ:ಉಕ್ಕಿ ಹರಿದ ಕುಮಾರಧಾರಾ ನದಿ

0

ಸ್ನಾನಘಟ್ಟ ಮುಳುಗಡೆ

ಸುಬ್ರಹ್ಮಣ್ಯ ಪಂಜ -ಪುತ್ತೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭ

ಸುಬ್ರಹ್ಮಣ್ಯ, ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗಿರುವುದರಿಂದ ಕುಮಾರಧಾರಾ ನದಿ ಉಕ್ಕಿ ಹರಿಯಲು ಆರಂಭವಾಗಿದೆ.


ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ನಿನ್ನೆಯಿಂದ ಮುಳುಗಡೆಯಾಗಿದೆ.


ಶೌಚಗೃಹ, ಭಕ್ತರ ಲಗೇಜ್ ಕೊಠಡಿಯೂ ಭಾಗಶ ಮುಳುಗಡೆಯಾಗಿದೆ.
ಸುಬ್ರಹ್ಮಣ್ಯ ಪಂಜ -ಪುತ್ತೂರು ರಾಜ್ಯ ಹೆದ್ದಾರಿಯ ಮೇಲೆ ನದಿ ನೀರು ಬಂದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗದ್ದು ಇಂದು ಮತ್ತೆ ಪುನರಾರಂಭವಾಗಿರುವುದಾಗಿ ವರದಿಯಾಗಿದೆ.