ವಿವೇಕ ಜಾಗ್ರತ ಬಳಗ ಹರಿಹರ ಪಲ್ಲತ್ತಡ್ಕ_ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ವಿವೇಕ ಸಂಪದ ಓದುಗರ ಸಮಾವೇಶ

0

ವಿವೇಕ ಜಾಗ್ರತ ಬಳಗ ಹರಿಹರ ಪಲ್ಲತ್ತಡ್ಕ_ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ವಿವೇಕ ಸಂಪದ ಓದುಗರ ಸಮಾವೇಶ ಜು.17 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಚಂದ್ರಶೇಖರ ಕಿರಿಭಾಗ ನೆರವೇರಿಸಿದರು.

ಮುಖ್ಯ ಚಿಂತನಕಾರರಾಗಿ ಉಡುಪಿಯ ಉಪೆಂದ್ರ ಪೈ ಕಾಲೇಜಿನ ಉಪನ್ಯಾಸಕರಾದ ಶ್ರೀ ರಾಜೇಶ್‌ ನಾಯರ್ ಭಾಗವಹಿಸಿದ್ದರು
ವೇದಿಕೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅದ್ಯಕ್ಷರಾದ
ಕಿಶೋರ್ ಕುಮಾರ್ ಕೂಜುಗೋಡು,ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ, ಹರಿಹರ ಪಲ್ಲತ್ತಡ್ಕ ವಿವೇಕ ಜಾಗ್ರತ ಬಳಗದ ಅದ್ಯಕ್ಷರಾದ ಮೊನಪ್ಪ ಕುಜುಂಬಾರು ಉಪಸ್ಥಿತರಿದ್ದರು.

ಮಾದವ ಕರಂದ್ಲಾಜೆ ಪ್ರಾಸ್ತಾವಿಕ ನುಡಿಗಳನ್ನು ನೆರವೇರಿಸಿ,ಗುಲಾಬಿ ಹರಿಹರ ದನ್ಯವಾದಗೈದರು.ಉಷಾ ಪ್ರಭಾಕರ ಕಿರಿಭಾಗ ಕಾರ್ಯಕ್ರಮ ನಿರೂಪಿಸಿದರು.