ವಾಲ್ತಾಜೆ – ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ

0

ದೇವಚಳ್ಳ ಗ್ರಾಮದ ವಾಲ್ತಾಜೆಯ ಮೂರು ಕಡೆಗಳಲ್ಲಿ ಬಹು ಬೇಡಿಕೆಯ ಒಟ್ಟು ನೂರು ಮೀಟರ್ ಗಳ ವಾಲ್ತಾಜೆ ಉಳ್ಳಾಕಳು ರಸ್ತೆಯ ಕಾಂಕ್ರೀಟ್ ಕಾಮಗಾರಿ ಗ್ರಾ.ಪಂ. ಹಾಗೂ ವಿಶೇಷ ಅನುದಾನದೊಂದಿಗೆ ಪೂರ್ಣಗೊಂಡು ಅದರ ಉದ್ಘಾಟನಾ ಕಾರ್ಯಕ್ರಮ ಜು. 17ರಂದು ನೆರವೇರಿತು. ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಗಳನ್ನು ಗ್ರಾಮದ ಹಿರಿಯರಾದ ಶ್ರೀಮತಿ ಧರ್ಮಾವತಿ ಮುಂಡೋಡಿ, ಮಹಾಬಲ ಮುಂಡೋಡಿ, ಶ್ರೀಮತಿ ಶಾರದ ವಾಲ್ತಾಜೆ ಯವರು ನೆರವೇರಿಸಿದರು. ಕಂದ್ರಪ್ಪಾಡಿ ರಾಜ್ಯದೈವ ಪರುಷದೈವದ ಆಡಳಿತ ಮುಕ್ತೇಸರರಾದ ಕಾಳಿಕಾಪ್ರಸಾದ್ ಮುಂಡೋಡಿ ಯವರು ದೀಪ ಬೆಳಗಿ ಶುಭಹಾರೈಸಿದರು. ಪ್ರವೀಣ್ ಮುಂಡೋಡಿ ಯವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಪಂಚಾಯತ್ ಸದಸ್ಯರಾದ ಶ್ರೀ ಭವಾನಿಶಂಕರ ಮುಂಡೋಡಿ, ಅಶೋಕ್ ವಾಲ್ತಾಜೆ, ರಸ್ತೆ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.