ಭಾರೀ ಮಳೆ : ಸೋಣಂಗೇರಿ ಅಂಗನವಾಡಿ ಕೇಂದ್ರ ಜಲಾವೃತ

0

ಭಾರೀ ಮಳೆ ಸುರಿಯುತ್ತಿರುವ ಕಾರಣ ಸೋಣಂಗೇರಿ ಅಂಗನವಾಡಿ ಕೇಂದ್ರವು ಮಳೆ ನೀರಿನಿಂದ ಜಲಾವೃತಗೊಂಡಿದೆ. ಅಂಗನವಾಡಿ ಕೇಂದ್ರವು ತಗ್ಗುಪ್ರದೇಶದಲ್ಲಿರುವುದರಿಂದ ಈ ಮೊದಲೇ ಅಲ್ಲಿಯ ಮಕ್ಕಳನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು.


ಅಂಗನವಾಡಿ ಕೇಂದ್ರದ ಬಳಿ ರಸ್ತೆ ಮತ್ತು ಪರಿಸರದ ಮೇಲ್ಭಾಗದಿಂದ ಹರಿದು ಬಂದ ನೀರು ಕಟ್ಟಡದ ಸುತ್ತ ಆವರಿಸಿ ಅಂಗನವಾಡಿಯ ಒಳ ಭಾಗಕ್ಕೆ ನೀರು ನುಗ್ಗಿದೆ.
ಇದರಿಂದ ಅಲ್ಲಿದ್ದ ಪುಸ್ತಕ ಪರಿಕರಗಳು, ಟೇಬಲ್, ಕುರ್ಚಿ ನೆನೆದಿದ್ದು, ಸ್ಥಳೀಯರಾದ ಸತ್ಯ ಶಾಂತಿ ತ್ಯಾಗ ಮೂರ್ತಿ ಹಾಗೂ ಇತರರರು ಪರಿಕರಗಳನ್ನು ತೆರವುಗೊಳಿಸಿ ಪಕ್ಕದ ಅಂಗಡಿಯಲ್ಲಿ ಇರಿಸಿ ಸಹಕರಿಸಿದ್ದಾರೆ.
ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು, ಸ್ಥಳೀಯ ಸದಸ್ಯರು ಬಂದು ವೀಕ್ಷಣೆ ನಡೆಸಿದ್ದಾರೆ.