ಅಡ್ಪಂಗಾಯ ಅಯ್ಯಪ್ಪ ಸನ್ನಿಧಾನದಲ್ಲಿ ಸಂಕ್ರಮಣ ಪ್ರಯುಕ್ತ ದುರ್ಗಾಪೂಜೆ – ಸಾಧಕರಿಗೆ ಸನ್ಮಾನ

0

ಅಡ್ಪಂಗಾಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಕ್ರಮಣ ಪೂಜೆಯು ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರವರ ನೇತೃತ್ವದಲ್ಲಿ ಜು.18ರಂದು ನಡೆಯಿತು.

ಬೆಳಿಗ್ಗೆ ಪುರೋಹಿತರಿಂದ ಗಣಪತಿ ಹವನ ಹಾಗೂ ವೈದಿಕ ಕಾರ್ಯಕ್ರಮ ನಡೆಯಿತು.

ಸಂಜೆ ಶ್ರೀ ದುರ್ಗಾದೇವಿ ಪೂಜೆಯು ನಡೆದು ಬಳಿಕ ಗುರುಸ್ವಾಮಿಯವರಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಸೇವೆಯೊಂದಿಗೆ ಮಹಾ ಮಂಗಳಾರತಿ ನೇರವೇರಿತು.

ಈ ಸಂದರ್ಭದಲ್ಲಿ ಗುರುಸ್ವಾಮಿಯವರಿಂದ ವಿವಿಧ ಕ್ಷೇತ್ರದ ಸಾಧಕರಾದ

ಸುದ್ದಿ ವಾರಪತ್ರಿಕೆ ಮಾಹಿತಿ ವಿಭಾಗದ ಮುಖ್ಯಸ್ಥ, ಹಿರಿಯ ಪತ್ರಕರ್ತ ಕೃಷ್ಣ ಬೆಟ್ಟ,
ಜೀವ ವಿಮಾ ಮುಖ್ಯ ಸಲಹೆಗಾರ ಗೋಪಾಲಕೃಷ್ಣ ಬೆಳ್ಳಾರೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು. ಜೊತೆಗೆ ಗುರುಸ್ವಾಮಿಯವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮ ನಡೆಯಿತು.