ಪೆರುವಾಜೆ : ಚೆನ್ನಾವರ ಗೌರಿಹೊಳೆ ತಡೆಗೋಡೆಗೆ ರೂ.80 ಲಕ್ಷ ಅನುದಾನ ಮಂಜೂರು

0

ಪೆರುವಾಜೆ ಗ್ರಾಮದ ಚೆನ್ನಾವರ ಎಂಬಲ್ಲಿ ಗೌರಿಹೊಳೆ ಬದಿ ತಡೆಗೋಡೆ ರಚನೆಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ.80 ಲಕ್ಷ ಅನುದಾನ ಮಂಜೂರಾಗಿದೆ.
ಗೌರಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು ಅದರ ಪಕ್ಕದಲ್ಲಿ ಕಳೆದ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಹೊಳೆ ಬದಿ ಕೃಷಿ ಭೂಮಿ ಕೊಚ್ಚಿ ಹೋಗಿ ಅಪಾರ ಹಾನಿಯಾಗಿತ್ತು.ಪಕ್ಕದಲ್ಲಿಯೆ ಹೊಸ ಸೇತುವೆ ಕೂಡ ನಿರ್ಮಾಣವಾಗಿದೆ.
ಈ ಬಗ್ಗೆ ಕುಶಾಲಪ್ಪ ಪೆರುವಾಜೆಯವರು ಸುಳ್ಯ ಶಾಸಕರ ಮುಖಾಂತರ ಸಣ್ಣ ನೀರಾವರಿ ಇಲಾಖೆಗೆ ತಡೆಗೋಡೆ ನಿರ್ಮಾಣ ಮಾಡಲು ಅನುದಾನಕ್ಕಾಗಿ ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿದ ನೀರಾವರಿ ಇಲಾಖೆ ತಡೆಗೋಡೆ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡಿರುವುದಾಗಿ ಕುಶಾಲಪ್ಪ ಪೆರುವಾಜೆಯವರು ತಿಳಿಸಿದ್ದಾರೆ.