ಪರಿವಾರಕಾನ ಉಮೇಶರ ಮನೆಗೆ ಮರ ಬಿದ್ದು ಅಪಾರ ಹಾನಿ

0

ಸುಳ್ಯ ಕಸಬಾ ಗ್ರಾಮದ ಪರಿವಾರಕಾನ ಉಮೇಶ್ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಸಾಗುವಾನಿ ಮರ ಬಿದ್ದು ಅಪಾರ ಹಾನಿ ಉಂಟಾದ ಘಟನೆ ಜು. 23ರಂದು ರಾತ್ರಿ ನಡೆದಿದೆ.


ಮನೆಯವರು ರಾತ್ರಿಯ ಊಟ ಮುಗಿಸಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಏಕಾಏಕಿ ಮರ ಮನೆಯ ಮಾಡಿನ ಬದ್ದ ಶಬ್ದಕ್ಕೆ ಮನೆಯವರು ಬೆಚ್ಚಿ ಹೊರಗೆ ಓಡಿದಾಗ ಉಮೇಶ್ ರ ಪತ್ನಿ ಬಿದ್ದು ಕಾಲಿಗೆ ಪೆಟ್ಟಾಗಿರುವುದಾಗಿ ತಿಳಿದುಬಂದಿದೆ.

ಅವಘಡದಲ್ಲಿ ಮನೆಯ ಹಂಚಿನ ಮಾಡು ಸಂಪೂರ್ಣ ನಾಶವಾಗಿರುವುದಲ್ಲದೆ, ಕಲ್ಲಿನ ಗೋಡೆಗೂ ಹಾನಿಯುಂಟಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳು ಬಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.