ಜಯನಗರ: ಗ್ಯಾಸ್ ಸಿಲಿಂಡರ್  ಬದಲು ನೀರಿನ ಸಿಲಿಂಡರ್

0

ಗ್ಯಾಸ್ ಬದಲು ಬರೀ ನೀರು ಕಂಡ ಮನೆಯವರು ಶಾಕ್

ಜಯನಗರ ಕೊರಂಬಡ್ಕದಲ್ಲಿ ಪ್ರಕಾಶ ಎಂಬುವವರ ಮನೆಯಲ್ಲಿ ಒಲೆಗೆ ಇರಿಸಿದ್ದ ಹೊಸ ಗ್ಯಾಸ್ ಸಿಲಿಂಡರ್ ತುಂಬಾ ನೀರು ಕಂಡುಬಂದಿದ್ದು ಮನೆಯವರು ಶಾಕ್ ಆದ ಘಟನೆ ಇಂದು ವರದಿಯಾಗಿದೆ.

ಪ್ರಕಾಶ ರವರು ಕಳೆದ ಒಂದು ತಿಂಗಳ ಹಿಂದೆ ಇಂಡಿಯನ್ ಗ್ಯಾಸ್ ಎಜೇನ್ಸಿಯಿಂದ ಗ್ಯಾಸ್ ಸಿಲಿಂಡರ್ ಅನ್ನು ಪಡೆದಿದ್ದರು. ಮನೆಯಲ್ಲಿ ಒಲೆಯಲ್ಲಿ ಇರಿಸಿದ್ದ ಸಿಲಿಂಡರ್ ಖಾಲಿಯಾಗದ ಕಾರಣ ಒಂದು ತಿಂಗಳ ಬಳಿಕ ಇಂದು ಅದನ್ನು ಬಳಕೆ ಮಾಡಿದರು.

ಆದರೆ ಸಿಲಿಂಡರ್ ಅಳವಡಿಸಿ ಒಲೆಯಲ್ಲಿ ಚಾ ನೀರು ಇರಿಸಿ ಚಾ ಕುದಿಯುವ ಮುನ್ನವೇ ಒಲೆ ಉರಿಯುವುದು ನಿಂತು ಹೋಗಿದೆ. ಮನೆಯವರು ಪರೀಕ್ಷಿಸಿದಾಗ ಸಿಲೆಂಡರ್ ಭಾರವಾಗಿದ್ದು ಕಂಡು ಬಂದು ಅವರು ಪಕ್ಕದ ಮನೆಯ ನವೀನ್ ಮಚಾದೋರನ್ನು ಕರೆದು ವಿಷಯ ತಿಳಿಸಿದ್ದಾರೆ.


ಬಳಿಕ ಅವರಿಬ್ಬರು ಅದನ್ನು ಪೂರ್ಣವಾಗಿ ಪರೀಕ್ಷಿಸಿ ಒಂದು ಪಿನ್ ಮೂಲಕ ಗ್ಯಾಸ್ ಬರುವ ಜಾಗವನ್ನು ಹೊತ್ತಿದಾಗ ಹಂಡೆಯಿಂದ ನೀರು ಬರಲು ತೊಡಗಿತು. ಇದನ್ನು ನೋಡಿ ಶಾಕ್ ಆದ ಅವರು ಸುದ್ದಿಗೆ ತಿಳಿಸಿದ್ದಾರೆ.

ಘಟನೆಯಿಂದ ಮನೆಯವರು ನಮಗೆ ಮೋಸ ಆಗಿದ್ದು ಸಂಭಂದಪಟ್ಟವರು ಕೂಡಲೇ ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಕೊಡುವಂತೆ ಕೇಳಿಕೊಂಡಿದ್ದಾರೆ.

ಆದರೆ ಈ ರೀತಿ ಸಂಭವಿಸಲು ಕಾರಣ ಏನು ಎಂಬುವುದು ಗ್ಯಾಸ್ ಏಜೆಂಟ್  ರವರು ಬಂದು ನೋಡಿದ ಬಳಿಕವೇ ತಿಳಿಯಬೇಕಾಗಿದೆ.