ಚೆಂಬು: ಆನ್ಯಾಳದಲ್ಲಿ ಬರೆಜರಿದು ಮನೆ -ಶೌಚಾಲಯಕ್ಕೆ ಹಾನಿ

0

ಎಡೆಬಿಡದೆ ಸುರಿಯುತ್ತಿರುವ ವಿಪರೀತ ಮಳೆಗೆ ಬರೆ ಜರಿದು ಮನೆಯ ಹಿಂಬದಿ ಹಾಗೂ ಶೌಚಾಲಯಕ್ಕೆ ಹಾನಿ ಸಂಭವಿಸಿದ ಘಟನೆ ಚೆಂಬು ಗ್ರಾಮದ ಆನ್ಯಾಳದಲ್ಲಿ ಜು.30ರಂದು ಸಂಭವಿಸಿದೆ.

ಆನ್ಯಾಳ ಪರಿಶಿಷ್ಟ ಜಾತಿ ಕಾಲನಿಯ ಗೋಪಾಲ ಎಂಬವರ ಮನೆಯ ಹಿಂಬದಿ ಬರೆಜರಿದು, ಸಿಮೆಂಟ್ ಶೀಟ್ ಗಳಿಗೆ ಹಾನಿಯಾಗಿದ್ದು, ಮನೆಯ ಒಳಗೆ ಮಳೆನೀರು ಆವರಿಸಿದೆ.

ರಾತ್ರಿ ವೇಳೆ ಬರೆಜರಿದಿದ್ದು, ಮನೆಯವರು ಪಕ್ಕದಲ್ಲಿರುವ ಸಹೋದರ ಕೃಷ್ಣಪ್ಪ ಅವರ ಮನೆಗೆ ಸ್ಥಳಾಂತರಗೊಂಡರೆಂದು ತಿಳಿದುಬಂದಿದೆ.

ಇದರ ಪಕ್ಕದಲ್ಲಿರುವ ಪುಷ್ಪಾ ಎಂಬವವರ ಮನೆಗೆ ಹಿಂಬದಿ ಮನೆ ಜರಿದು ಶೌಚಾಲಯಕ್ಕೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.