ಬೆಳ್ಳಾರೆ ಗೌರಿಪುರಂ ನಾಗೇಶ್ ಕುಲಾಲ್ ರವರ ಮನೆ ಜಲಾವೃತ

0

ಬೆಳ್ಳಾರೆಯ ಗೌರಿಪುರಂ ಬಳಿಯ ನಾಗೇಶ್ ಕುಲಾಲ್ ಎಂಬವರ ಮನೆಯ ಸುತ್ತ ಗೌರಿಹೊಳೆಯ ನೀರು ಆವರಿಸಿದೆ.

ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನೀರು ಮನೆಯ ಒಳಗೆ ಪ್ರವೇಶಿಸಿದರೆ ಮನೆಗೆ ಅಪಾಯ ಎದುರಾಗಲಿದೆ. ಸ್ಥಳೀಯಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.