ಬೆಳ್ಳಾರೆ ಪರಿಸರದಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಕಾಯ ತಂಡ ದಿಂದ ರಕ್ಷಣಾ ಕಾರ್ಯ

0

ಬೆಳ್ಳಾರೆ ಎಸ್ ಕೆ ಎಸ್ ಎಸ್ ಎಫ್ ವಿಕಾಯ ತಂಡದಿಂದ ಪರಿಸರದಲ್ಲಿ ಮಳೆಗೆ ಬರೆ ಜರಿದ ಪ್ರದೇಶದಲ್ಲಿ ಮಣ್ಣುಗಳ ತೆರವು ಕಾರ್ಯ ಮತ್ತು ಹೂಳು ತುಂಬಿದ ಚರಂಡಿಗಳ ಸ್ವಚ್ಛತಾ ಕಾರ್ಯ ಜು. 29 ರಂದು ನಡೆಯಿತು.

ಉಮಿಕ್ಕಳ ಬಳಿ ಬರೆ ಜರಿದು ಸ್ಥಳೀಯ ಮನೆಯವರಿಗೆ ರಸ್ತೆ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದ್ದು ಪಂಚಾಯತ್ ವತಿಯಿಂದ ಜೆ ಸಿ ಬಿ ತರಿಸಿ ಇದನ್ನು ಸರಿ ಪಡಿಸಿ ಕೊಡಲಾಯಿತು.


ಚರಂಡಿಯಲ್ಲಿ ಮಣ್ಣು ತುಂಬಿ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದ್ದ ಸ್ಥಳಕ್ಕೆ ತೆರಳಿ ಕಣಿ ಸರಿ ಪಡಿಸಿ ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆಯನ್ನು ಮಾಡಿಕೊಟ್ಟರು.

ವಿಖಾಯ ತಂಡದ ಮುಖ್ಯಸ್ತರುಗಳಾದ ಕೆ ಎಸ್ ಜಮಾಲುದ್ದಿನ್ ಬೆಳ್ಳಾರೆ,ಶರೀಫ್ ನೆಟ್ಟಾರ್, ಅಯ್ಯುಬ್ ಖಾನ್ ಅಯ್ಯನಕಟ್ಟೆ, ಉನೈಸ್, ಮುನೀಸ್, ಮಹಮ್ಮದ್ ಸಫ್ವನ್, ರಹೀಮ್ ನೆಟ್ಟಾರ್, ಮಹಮ್ಮದ್ ಶಿಫ್ವಾನ್ ಶ್ರಮದಾನದಲ್ಲಿ ಭಾಗವಹಿಸಿದ್ದರು.