ಶೇಣಿ: ಮನೆ ಅಂಗಳಕ್ಕೆ ಹರಿಯುತ್ತಿರುವ ನೀರಿನ ಸಮಸ್ಯೆಗೆ ಪಂಚಾಯತ್ ಸದಸ್ಯರಿಂದ ಪರಿಹಾರ

0

ಅಮರಪಡ್ನೂರಿನ‌ ಶೇಣಿ‌ ವಾರ್ಡಿನಲ್ಲಿ ಮುಳ್ಕುಂಜ ರಸ್ತೆ ಕಾಂಕ್ರೀಟ್ ಮಾಡಲಾಗಿದ್ದು ಚರಂಡಿ‌ ವ್ಯವಸ್ಥೆ ಇಲ್ಲದೆ ಮಳೆಯ ನೀರು ಸ್ಥಳೀಯ ಪೂವ ಅಜಿಲ ಎಂಬವರ ಮನೆಯ ಅಂಗಳಕ್ಕೆ ಬರುತ್ತಿದೆ ಎಂದು ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಈ ಕುರಿತು ಪಂಚಾಯತ್ ಸದಸ್ಯ ಅಶೋಕ‌ ಚೂಂತಾರು ‌ಮುತುವರ್ಜಿ‌ ವಹಿಸಿ ಪೂವ ಅಜಿಲ ರವರ ಮನೆಯಂಗಳಕ್ಕೆ ಬರುತ್ತಿದ್ದ ನೀರಿನ ಹರಿವನ್ನು ಬದಲಾಯಿಸಿ ಪರ್ಯಾಯ ಚರಂಡಿ ನಿರ್ಮಿಸಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿದು ಬಂದಿದೆ.