ಕುಂಬಳಚೇರಿ ಗಣಪತಿ ಗೌಡ ಪೆರಾಜೆ ಶ್ರದ್ಧಾಂಜಲಿ ಸಭೆ

0

ಪೆರಾಜೆ ಗ್ರಾಮದ ಕುಂಬಳಚೇರಿ ಗಣಪತಿ ಗೌಡರ ಶ್ರದ್ಧಾಂಜಲಿ ಸಭೆಯು ಆ.1ರಂದು ಮೃತರ ಸ್ವಗೃಹ ಕುಂಬಳಚೇರಿ ಮನೆಯಲ್ಲಿ ನಡೆಯಿತು. ಮೃತರ ಬಗ್ಗೆ ನುಡಿನಮನವನ್ನು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಮೊಕ್ತೇಸರರಾದ ವಿಶ್ವನಾಥ ಕುಂಬಳಚೇರಿಯವರು ಮಾತನಾಡಿ ಮೃತರು ಸಾಮಾಜಿಕ, ಧಾರ್ಮಿಕ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ತಿಳಿಸಿದರು. ನಂತರ ಅವರ ಪತ್ನಿ ಪೂವಮ್ಮ ಕುಂಬಳಚೇರಿ ಪುಷ್ಮಾರ್ಚಣೆ ಗೈದರು. ನಂತರ ಪುತ್ರಿ ಕಸ್ತೂರಿ, ಪುತ್ರ ದಯಾನಂದ, ಜಗದೀಶ, ಸೊಸೆ ಮೀರಾ ದಯಾನಂದ, ಅಳಿಯ ಮನೋಜ್ ನರಿಯೂರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಸಾರ್ವಜನಿಕರು ಪುಷ್ಪನಮನ ಗೈದರು.