ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತಿ ಶ್ರೀಗಳ ಚಾತುರ್ಮಾಸ್ಯ

0

ಡಾ. ಟಿ. ಶ್ಯಾಮ್ ಭಟ್ ಸಂಪಾಜೆ ಅವರಿಗೆ ಸನ್ಮಾನ

ಕಾಸರಗೋಡು ತಾಲೂಕಿನ ಎಡನೀರು ಮಠದಲ್ಲಿ ನಡೆದ ಪೀಠಾಧಿಪತಿಗಳಾದ ಸಚ್ಚಿದಾನಂದ ಭಾರತಿ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಸಂಪಾಜೆಯ ಡಾ. ಟಿ. ಶ್ಯಾಮ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಎಡನೀರು ಮಠದ ಮಠಾಧೀಶರಾದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಹಾಗೂ ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಡಾ. ಟಿ. ಶ್ಯಾಮ್ ಭಟ್ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು‌. ಕುಂಟಾರು ರವೀಶ ತಂತ್ರಿ, ಕೊಲ್ಯ ದೇವಸ್ಥಾನದ ಅಧ್ಯಕ್ಷ ಮಧುಸೂದನ್ ಆಯರ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.