ಆಲೆಟ್ಟಿ: ನೆಡ್ಚಿಲು ಚರಣ್ ರಾಜ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ಹುದ್ದೆಗೆ ನೇಮಕ

0

ಆಲೆಟ್ಟಿ ಗ್ರಾಮದ ನೆಡ್ಚಿಲು ನಿವಾಸಿ ಚರಣ್ ರಾಜ್ ರವರು ಬ್ಯಾಂಕಿಂಗ್ ಹುದ್ದೆಗೆ ಪರೀಕ್ಷೆ ಬರೆದು ತೇರ್ಗಡೆಗೊಂಡು 2023 ರಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಕಚೇರಿ ಸಹಾಯಕ ಹುದ್ದೆಗೆಸೇರ್ಪಡೆಗೊಂಡಿದ್ದರು. ಇದೀಗ ಇನ್ಸ್ಟಿಟ್ಯೂಟ್ ಆಫ್ ಬ್ಯಾಕಿಂಗ್ ಸಿಬ್ಬಂದಿ ಆಯ್ಕೆ ಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಸಹಾಯಕ ಹುದ್ದೆಗೆ ಕರ್ನಾಟಕ ರಾಜ್ಯದಲ್ಲಿ 26ನೇ ರ‍್ಯಾಂಕ್‌ ಪಡೆದು ನೇಮಕಗೊಂಡಿರುತ್ತಾರೆ.

ಇವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ. ಆಲೆಟ್ಟಿಯ ನೆಡ್ಚಿಲು ಮುದ್ದಯ್ಯ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರರಾಗಿರುತ್ತಾರೆ.