ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರಿಗೆ ಜೇಸಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ

0

ಮಂಗಳೂರು ಜೇಸಿಐ , ಮಂಗಳೂರು ಶ್ರೇಷ್ಠ ಆತಿಥ್ಯದಲ್ಲಿ ಇತ್ತೀಚಿಗೆ ನಡೆದ ವೈಭವ ವಲಯ ವ್ಯವಹಾರ ಸಮ್ಮೇಳನದಲ್ಲಿ ಕರಾಟೆ ಶಿಕ್ಷಕ ಜೇಸಿಐ. ಚಂದ್ರಶೇಖರ ಕನಕಮಜಲು ಅವರಿಗೆ ಸಮಾಜದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಕೊಡಮಾಡುವ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ವಿಷ್ಣುಪ್ರಕಾಶ್ ನಾರ್ಕೋಡು, ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ವಲಯ ಉಪಾಧ್ಯಕ್ಷ ಜೇಸಿಐ ಅಭಿಷೇಕ್ , ಜೇಸಿಐ ರವಿಚಂದ್ರ ಪಾಟಾಳಿ , ಜೇಸಿಐ ಸುನಿಲ್ ಕುಮಾರ್, ಸೇರಿದಂತೆ ಜೇಸಿಐ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.