ಸೋಣಂಗೇರಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

0

ಆ 26 ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಇಂದು ನೆರವೇರಿತು.ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ, ಕಾರ್ಯದರ್ಶಿ, ನಿರಂಜನ ಮಿತ್ತಮಜಲು, ಸದಸ್ಯರುಗಳಾದ ಶ್ರೀಮತಿ ಮೋಹಿನಿ ನಡುಮನೆ, ಚಿದಾನಂದ ಬಾಂಜಿಕೋಡಿ,ಮನೋಹರ ಬಾಂಜಿಕೋಡಿ, ಕೃತಿಕ್ ಬಾಂಜಿಕೋಡಿ,ಪ್ರಣಾಮ್ ಬಾಂಜಿಕೋಡಿ,ಯಕ್ಷಿತ್ ಬಾಂಜಿಕೋಡಿ, ವೆಂಕಟ್ರಮಣ ಬಾಂಜಿಕೋಡಿ,ಅನ್ವಿತ್ ಬಾಂಜಿಕೋಡಿ,ಸಾತ್ವಿಕ್ ಕುಂಟಿಕಾನ, ಹೇಮಂತ್ ಕುಂಟಿಕಾನ, ರಕ್ಷಿತ್ ಸೋಣಂಗೇರಿ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅಂಗನವಾಡಿ ಮಕ್ಕಳು,ಶಾಲಾಮಕ್ಕಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಶಾಂತಾರಾಮ ಗೌಡ,ಹೊಸಗದ್ದೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಪ್ರಸಾದ್ ನೀರಬಸಿರಿ ಹಾಗೂ ಶ್ರೀಮತಿ ದೀಪ ಅಜಕಲಮೂಲೆ ಉಪಸ್ಥಿತರಿರುವರು.

ಪೂರ್ವಾಹ್ನ 10.00ರಿಂದ ಕಾರ್ಯಕ್ರಮ ಪ್ರಾರಂಭವಾಗಿ ಸಾಯಂಕಾಲ 05.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು ವಹಿಸಲಿದ್ದಾರೆ.ಬಹುಮಾನ ವಿತರಕರಾಗಿ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ತಂಗಮ್ಮ.ಕೆ.ಎಸ್ ,ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಈಶ್ವರ ನಾಯ್ಕ ಸೋಣಂಗೇರಿ ಹಾಗೂ ಶ್ರೀಮತಿ ಅಂಬಿಕಾ ಕುಕ್ಕನ್ನೂರು ಉಪಸ್ಥಿತರಿರುವರು.ವಿಶೇಷವಾಗಿ ಐದು ವರ್ಷದವರೆಗಿನ ಮಕ್ಕಳಿಗೆ ಕೃಷ್ಣವೇಷ, ಪುರಾಣದ ಬಗ್ಗೆ ಚೀಟಿ ಹೆಕ್ಕಿ ಮೂಕಾಭಿನಯ ಹಾಗೂ ಪುರುಷರಿಗೆ ವಿಶೇಷ ಆಕರ್ಷಣೆಯ ಸ್ಪರ್ಧೆ ನಡೆಯಲಿದೆ.