ಸಂಪಾಜೆ ಯಾದವಸಭಾ ಪ್ರಾದೇಶಿಕ ಸಮಿತಿ ಮಹಾಸಭೆ

0

ಸಂಪಾಜೆ ಯಾದವಸಭಾ ಪ್ರಾದೇಶಿಕ ಸಮಿತಿಯ ಮಹಾಸಭೆಯು ಕಲ್ಲುಗುಂಡಿಯ ಯಾದವ ಸಮುದಾಯಭವನದಲ್ಲಿ ಆ.4ರಂದು ನಡೆಯಿತು.

ಕಾರ್ಯಕ್ರಮವನ್ನು ಯಕ್ಷಗಾನ ಕಲಾವಿದ ಕೊರಗಪ್ಪ ಮಣಿಯಾಣಿ ಕೀಲಾರು ಅವರು ಉದ್ಘಾಟಿಸಿದರು‌. ಸಂಪಾಜೆ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಬಾಲೆಂಬಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರನ್ ಕಡಪಾಲ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಆಶಾ ಅವರು ಲೆಕ್ಕಪತ್ರ ಮಂಡಿಸಿದರು.

‌ವೇದಿಕೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಕಾರ್ಯದರ್ಶಿ ಕೃಷ್ಣಬೆಟ್ಟ, ತಾಲೂಕು ಯಾದವಶ್ರೀ ಪ್ರಶಸ್ತಿ ಪುರಸ್ಕೃತ ಕೊರಗಪ್ಪ ಮಣಿಯಾಣಿ ಕೀಲಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಗೂನಡ್ಕ, ಬೆಂಗಳೂರಿನಲ್ಲಿ ಪೊಲೀಸ್ ಆಗಿರುವ ರವಿಕುಮಾರ್ ಕೈಪಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳನ್ನು ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಮುದಾಯದ ಕೊಡುಗೈದಾನಿ ಶ್ರೀಮತಿ ದೇವಿ ಬಾಲನ್ ಹಾಗೂ ಅರುಣ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀಮತಿ ಆಶಾ ಬಿ.ಆರ್. ಸ್ವಾಗತಿಸಿ, ನಿಶಾನ್ ದೊಡ್ಡಡ್ಕ ವಂದಿಸಿದರು. ಆಶಾ ಗೂನಡ್ಕ ಮತ್ತು ಆಶಾ ದೊಡ್ಡಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.