ನಗರ ಗೌಡರ ಯುವ ಸೇವಾ ಸಂಘದಿಂದ ಆಟಿಯ ಸಂಭ್ರಮ

0

ಸುಳ್ಯ ಗೌಡರ ಯುವ ಸೇವಾ ಸಂಘದ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕಗಳ ನೇತೃತ್ವದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ಆ.೪ ರಂದು ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ ನಿವೃತ್ತ ಅಧ್ಯಾಪಕರಾದ ಕುದ್ಪಾಜೆ ಸೋಮಯ್ಯ ಗೌಡರು ಹಾಗೂ ಅವರ ಪತ್ನಿ ಶ್ರೀಮತಿ ಪದ್ಮಾವತಿ ಸೋಮಯ್ಯ ಗೌಡರು ದೀಪ ಬೆಳಗಿಸಿ ನೆರವೇರಿಸಿದರು. ನಗರ ಗೌಡ ಸಮಿತಿ ಅಧ್ಯಕ್ಷ ರಾಕೇಶ್ ಕುಂಟಿಕಾನ ಅಧ್ಯಕ್ಷತೆ ವಹಿಸಿದ್ದರು. ಲ| ಶ್ರೀಮತಿ ಇಂದಿರಾ ರಘುರಾಮ್ ಮಾಣಿಬೆಟ್ಟು ಹಾಗೂ ಸುಳ್ಯ ನಗರ ಮಹಿಳಾ ಗೌಡ ಸಮಿತಿ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಗೌರವ ಉಪಸ್ಥಿತರಿದ್ದರು.


ಸುಳ್ಯ ತಾಲೂಕು ಗೌಡರ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತಾಲೂಕು ತರುಣ ಘಟಕದ ಅಧ್ಯಕ್ಷ ಪ್ರೀತಂ ಡಿ.ಕೆ., ನ.ಪಂ. ಸದಸ್ಯೆ ಶ್ರೀಮತಿ ಶೀಲಾ ಕುರುಂಜಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಕೊನೆಯಲ್ಲಿ ಸೋಮಯ್ಯ ಮಾಸ್ತರ್ ದಂಪತಿಯನ್ನು ಹಾಗೂ ಶ್ರೀಮತಿ ಪದ್ಮಾವತಿಯವರನ್ನು ಮತ್ತು ಶ್ರೀಮತಿ ಇಂದಿರಾ ರಘುರಾಮರನ್ನು ಗೌರವಿಸಿ ಸನ್ಮಾನಿಸಲಾಯಿತು.


ಐ.ಬಿ.ಚಂದ್ರಶೇಖರ ಸ್ವಾಗತಿಸಿ, ರಾಧಾಕೃಷ್ಣ ಕುಂತಿನಡ್ಕ ವಂದಿಸಿದರು. ಶಶಿಧರ ಎಂ.ಜೆ. ಹಾಗೂ ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಟಿ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊಂಡವು.